ಟಿ. ಶ್ರೀಧರ್ ಕೊಲೆ ಪ್ರಕರಣ: 6 ಜನ ಬಂಧನ

ಹರಪನಹಳ್ಳಿ, ಜು.19- ಪಟ್ಟಣದ ಆರ್‌ಟಿಐ ಕಾರ್ಯಕರ್ತ ಟಿ.ಶ್ರೀಧರ್ ಕೊಲೆ ಪ್ರಕರಣಕ್ಕೆ  ಸಂಬಂಧಪಟ್ಟಂತೆ ಪೊಲೀಸರು  ಆರು ಜನ ಆರೋಪಿಗಳನ್ನು ಬಂಧಿಸಿದ್ದಾರೆ.

ಪುರಸಭೆ ಮಾಜಿ ಅಧ್ಯಕ್ಷ ಸೇರಿದಂತೆ ಆರು ಜನರನ್ನು ಪೊಲೀಸರು ವಶಕ್ಕೆ ಪಡೆದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. 

ಹಡಗಲಿ ಶಾಸಕ ಪಿ.ಟಿ.ಪರಮೇಶ್ವರ ನಾಯ್ಕ ಅವರ ಆಪ್ತ ಹೆಚ್.ಕೆ. ಹಾಲೇಶ್, ರಾಯದುರ್ಗದ ವಾಗೀಶ್, ಹಳೇ ಬ್ಯಾಡ್ರ ಹನುಮಂತ, ಯಲ್ಲಪ್ಪ, ಮ್ಯಾಕಿ ಹನುಮಂತ ಹಾಗೂ ರಾಯದುರ್ಗದ ಹನುಮಂತ ಅವರನ್ನು ಬಂಧಿಸಲಾಗಿದೆ.

ಹತ್ಯೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಶ್ರೀಧರ್ ಪತ್ನಿ ಶಿಲ್ಪಾ ಅವರು ಶಾಸಕ ಪಿ.ಟಿ. ಪರಮೇಶ್ವರನಾಯ್ಕ ಪುತ್ರ ಟಿ. ಭರತ್‍ನಿಂದ ಬೆದರಿಕೆ ಇತ್ತು ಎಂದು ದೂರು ನೀಡಿದ್ದರು. ಹೆಚ್.ಕೆ.ಹಾಲೇಶ್ ಬಂಧನವಾಗುತ್ತಿದ್ದಂತೆ ಪಿ.ಟಿ. ಭರತ್ ತಲೆ ಮರೆಸಿಕೊಂಡಿದ್ದಾರೆ.  ಆತನಿಗಾಗಿ ಪೊಲೀಸರು ತೀವ್ರ ಶೋಧನೆ ನಡೆಸಿದ್ದಾರೆ.

error: Content is protected !!