ಮಹಾರಾಜಪೇಟೆ ವಿಠ್ಠಲ ಮಂದಿರದಲ್ಲಿ ವಿಶೇಷಾಲಂಕಾರ

ದಾವಣಗೆರೆ, ಜು.18- ನಗರದ ಶ್ರೀ ಭಾವಸಾರ ಕ್ಷತ್ರಿಯ ಸಮಾಜ (ರಿ.ನಂ. 07)ದಿಂದ ಮಹಾರಾಜ ಪೇಟೆಯ ಶ್ರೀ ವಿಠ್ಠಲ ಮಂದಿರದಲ್ಲಿ ನಾಡಿದ್ದು ದಿನಾಂಕ 20ರ ಮಂಗಳ ವಾರ ಧಾರ್ಮಿಕ ಕಾರ್ಯಕ್ರಮಗಳು ಜರುಗಲಿವೆ.

ಪಂಡರಾಪುರ ವಾರಿ ನಿಮಿತ್ಯ ಶ್ರೀ ವಿಠ್ಠಲ ರುಕುಮಾಯಿ ದೇವರಿಗೆ ಅಭಿಷೇಕ ನಡೆಸಲಾಗುವುದು. ಅಂದು ಬೆಳಿಗ್ಗೆ 5.30ಕ್ಕೆ ಕಾಕಡಾರತಿ ಭಜನೆ, ಪಲ್ಲಕ್ಕಿಯೊಂದಿಗೆ ನಗರ ಪ್ರದಕ್ಷಿಣೆ ಉತ್ಸವ, ಶ್ರೀ ಗೀತಾ ಜ್ಞಾನೇಶ್ವರಿ ಪಾರಾಯಣ, ಹರಿಪಾಠ, ಮಹಾ ಮಂಗಳಾರತಿ, ತೀರ್ಥ ಪ್ರಸಾದ ನಡೆಯುವುದು. ಕಾರ್ಯಕ್ರಮದ ಅಂಗವಾಗಿ ವಿಠ್ಠಲ ರುಕ್ಮಿಣಿ ದೇವರಿಗೆ ವಿಶೇಷ ಅಲಂಕಾರ ಇರುತ್ತದೆ.

ಅಂದು ಸಂಜೆ 6 ಗಂಟೆಗೆ  ಶ್ರೀ ಹ.ಭ.ಪ ಮಾರುತಿ ವಂಟಕರ್ ಅವರಿಂದ ಪ್ರವಚನ, 7 ಗಂಟೆಗೆ ಕೀರ್ತನಕಾರ ಶ್ರೀ ಹ.ಭ.ಪ ಚಂದ್ರಕಾಂತ ವಾದೋನಿ ಅವರಿಂದ ಕೀರ್ತನೆ. ರಾತ್ರಿ 10 ಗಂಟೆ ನಂತರ ಸಂಗೀತ ಬೈಠಕ್ ಅಖಂಡ ಭಜನೆ ಜಾಗರಣೆ ಕಾರ್ಯಕ್ರಮ ನಡೆಯಲಿದೆ.

 ದೈವ ಮಂಡಳಿ, ಭಜನಾ ಮಂಡಳಿ, ತರುಣ ಮಂಡಳಿ, ಕಲಾವತಿ ಮಹಿಳಾ ಮಂಡಳಿ ಇವರ ಸಹಯೋಗದಲ್ಲಿ ಈ ಕಾರ್ಯಕ್ರಮ ಏರ್ಪಾಡಾಗಿದೆ ಎಂದು ಭಜನಾ ಮಂಡಳಿ ಅಧ್ಯಕ್ಷ ನಿಂಗಸ್ವಾಮಿ ರಾವ್ ಖಮಿತ್ಕರ್ ತಿಳಿಸಿದ್ದಾರೆ.

error: Content is protected !!