ಕೂಡ್ಲಿಗಿ ಬಳಿ ರಸ್ತೆ ಅಪಘಾತ : ಸಾವು

ಕೂಡ್ಲಿಗಿ ಬಳಿ ರಸ್ತೆ ಅಪಘಾತ : ಸಾವು - Janathavaniಕೂಡ್ಲಿಗಿ, ಜು.18- ತಾಲ್ಲೂಕಿನ ಮೊರಬ ಗ್ರಾಮದ ಹೊರವಲಯದಲ್ಲಿ, ಎನ್‌ಹೆಚ್‌-50 ರಸ್ತೆಯಲ್ಲಿ ನಿನ್ನೆ ತಡರಾತ್ರಿ ರಸ್ತೆ ಅಪಘಾತ ಸಂಭವಿಸಿದ್ದು, ಬೈಕ್‌ಗೆ ಅಪರಿಚಿತ ವಾಹನ ಡಿಕ್ಕಿ ಹೊಡೆದ ಪರಿಣಾಮ ವಾಹನ ಸವಾರರಿಬ್ಬರು ಮೃತಪಟ್ಟಿದ್ದಾರೆ. ಕೂಡ್ಲಿಗಿ ಪಟ್ಟಣ ಪಂಚಾಯ್ತಿ ವ್ಯಾಪ್ತಿಯ 20ನೇ ವಾರ್ಡ್ ಗೋವಿಂದ ಗಿರಿತಾಂಡಾದ ಪೀಕ್ಯಾನಾಯ್ಕ (50), ಶಂಕರನಾಯ್ಕ (30) ಮೃತ ದುರ್ದೈವಿಗಳು. ಇವರು ತಮ್ಮ ಗ್ರಾಮದಿಂದ ಮೈಸೂರು ಕಡೆಗೆ ಉದ್ಯೋಗ ಅರಸಿ ಗುಳೇ ಹೊರಟಿದ್ದು,  ವಾಹನವೊಂದು ಇವರಿದ್ದ ಬೈಕ್‌ಗೆ ರಭಸವಾಗಿ ಡಿಕ್ಕಿ ಹೊಡೆದ ಪರಿಣಾಮ ಈ ದರಂತ ನಡೆದಿದೆ.   

ಕೂಡ್ಲಿಗಿ ಹೈವೇ ಪ್ಯಾಟ್ರೋಲ್ ಪೊಲೀಸ್ ಸಿಬ್ಬಂದಿ ರೇವಣ್ಣ ಹಾಗೂ ಮತ್ತಿತರರು ಸ್ಥಳಕ್ಕೆ ಭೇಟಿ ನೀಡಿದ್ದರು.

error: Content is protected !!