ಜೆ.ಡಿ.ಎಸ್ ತೊರೆದು ಬಿ.ಜೆ.ಪಿ. ಸೇರ್ಪಡೆ

ದಾವಣಗೆರೆ, ಫೆ.28 – ತಾಲ್ಲೂಕಿನ, ಆನಗೋಡು ಹೋಬಳಿ, ವಡ್ಡೇನಹಳ್ಳಿ ಗ್ರಾಮದ ಜೆ.ಡಿ.ಎಸ್. ಮುಖಂಡ ಕೆ.ಆರ್. ಶಿವಶಂಕರ್, ಕೆ. ಮರುಳಸಿದ್ದಪ್ಪ, ವಿ.ಎಸ್. ಜಯಪ್ರಕಾಶ್, ಇ.ವಿ. ಜಯದೇವ್, ಅವರುಗಳು ಜೆ.ಡಿ.ಎಸ್ ಪಕ್ಷ ತೊರೆದು ಲೋಕಸಭಾ ಸದಸ್ಯ ಜಿ.ಎಂ.ಸಿದ್ದೇಶ್ವರ ಹಾಗೂ ಜಿಲ್ಲಾ ಬಿ.ಜೆ.ಪಿ. ಅಧ್ಯಕ್ಷ ವೀರೇಶ್ ಹನಗವಾಡಿ ಇವರ ನೇತೃತ್ವದಲ್ಲಿ ಭಾರತೀಯ ಜನತಾ ಪಕ್ಷಕ್ಕೆ ಸೇರ್ಪಡೆಗೊಂಡರು.

ಈ ಸಂದರ್ಭದಲ್ಲಿ ಶಾಸಕರೂ, ಬಾಬು ಜಗಜೀವನ ರಾಂ ಕೈಗಾರಿಕಾ ಅಭಿವೃದ್ಧಿ ನಿಗಮದ ಅಧ್ಯಕ್ಷ ಪ್ರೊ|| ಲಿಂಗಣ್ಣ, ಬಯಲು ಸೀಮೆ ಅಭಿವೃದ್ಧಿ ನಿಗಮದ ಅಧ್ಯಕ್ಷ ಅಣಬೇರು ಜೀವನಮೂರ್ತಿ, ಪಿ.ಎಲ್.ಡಿ. ಬ್ಯಾಂಕ್ ನಿರ್ದೇಶಕ ವೈ.ಬಿ. ನಾಗರಾಜ್ ಹಾಗೂ ಇತರರು ಉಪಸ್ಥಿತರಿದ್ದರು.

error: Content is protected !!