ಬಾಲಕನ ಬಂಧನ : ಐದು ಬೈಕ್‌ಗಳ ವಶ

ದಾವಣಗೆರೆ, ಏ.25- ಬೈಕ್‌ಗಳ ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ಕಾನೂನು ಸಂಘ ರ್ಷಕ್ಕೆ ಒಳಗಾದ ಬಾಲಕನನ್ನು ಬಂಧಿಸಿ ರುವ ಇಲ್ಲಿನ ಬಡಾ ವಣೆ ಪೊಲೀಸರು 5 ಪ್ರಕರಣಗಳನ್ನು ಪತ್ತೆ ಮಾಡಿ, 5 ಬೈಕ್‌ಗಳು ವಶಪಡಿಸಿಕೊಂಡಿದ್ದಾರೆ.

ನಗರದ ವಿವಿಧ ಬಡಾವಣೆಗಳಲ್ಲಿ ಬೈಕ್‌ಗಳನ್ನು ಕಳ್ಳತನ ಮಾಡಿರುವುದಾಗಿ ಬಾಲಕ ಒಪ್ಪಿಕೊಂಡಿದ್ದಾನೆ. ಬಡಾವಣೆ ಠಾಣಾ ಪೊಲೀಸ್ ನಿರೀಕ್ಷಕ ಸುರೇಶ ಸಗರಿ ನೇತೃತ್ವದಲ್ಲಿ ಠಾಣೆಯ ಪಿಎಸ್ಐಗಳಾದ ಬಿ.ಎಸ್. ಅರವಿಂದ, ಎಸ್.ಬಿ. ಚಿದಾನಂದಪ್ಪ ಹಾಗೂ ಸಿಬ್ಬಂದಿಗಳಾದ ಹರೀಶ್ ರೆಡ್ಡಿ, ಸಿದ್ದೇಶ್, ಅರುಣ ಕುಮಾರ, ಕೆ.ಬಿ. ಹರೀಶ್, ಸೈಯದ್ ಅಲಿ, ಬಿ. ವಿಶಾಲಾಕ್ಷಿ ಅವರುಗಳನ್ನೊಳಗೊಂಡ ತಂಡ ಕಾರ್ಯಾಚರಣೆ ನಡೆಸಿದೆ.

error: Content is protected !!