ಕೊಂಡಜ್ಜಿಯಿಂದ ಸಾಗುವ ರಸ್ತೆ ದುರಸ್ತಿಪಡಿಸಿ

ಮಾನ್ಯರೇ,

ದಾವಣಗೆರೆ ಮತ್ತು ಹರಿಹರ ತಾಲ್ಲೂಕಿನ ಗಡಿ ಗ್ರಾಮವಾದ ಕೊಂಡಜ್ಜಿಯಿಂದ ಹೊಸಪೇಟೆ ಹೆದ್ದಾರಿಯತ್ತ ಸಾಗುವ ನಾಲ್ಕು ಕಿ.ಮೀ. ನ ರಸ್ತೆ ದೊಡ್ಡ ದೊಡ್ಡ ಗುಂಡಿಗಳಿಂದ ತುಂಬಾ ಹಾಳಾಗಿ ಸಂಚರಿಸುವುದೇ ದುಸ್ತರವಾಗಿದೆ.  ಗಡಿ ಭಾಗವಾದ್ದರಿಂದ ಯಾರಿಗೂ ಈ ರಸ್ತೆ ಬೇಡವಾಗಿದೆ. ಜನಪ್ರತಿನಿಧಿಗಳೆನಿಸಿಕೊಂಡವರು ಅಪ್ಪಿತಪ್ಪಿಯೂ ಇತ್ತ ಸುಳಿದಾಡಿಲ್ಲ. ಸಂಬಂಧಪಟ್ಟ ಇಲಾಖೆಯವರು ಈಗಲಾದರೂ ಇತ್ತ ಗಮನ ಹರಿಸಿ ರಸ್ತೆ ದುರಸ್ತಿ ಮಾಡಿಸಬೇಕಾಗಿದೆ.


– ಮುರುಗೇಶ ಡಿ., ದಾವಣಗೆರೆ.

error: Content is protected !!