ಜಿಎಂಐಟಿ ತಂಡಗಳು ರಾಷ್ಟ್ರಮಟ್ಟದ ಸ್ಪರ್ಧೆಗೆ ಅಯ್ಕೆ

ದಾವಣಗೆರೆ, ಫೆ. 25- ನಗರದ ಜಿ.ಎಂ. ತಾಂತ್ರಿಕ ಮಹಾವಿದ್ಯಾಲಯದ ವಿದ್ಯಾರ್ಥಿಗಳು ಪ್ರಧಾನಿ ನರೇಂದ್ರ ಮೋದಿಯವರು  `ಅತ್ಮ ನಿರ್ಭರ ಭಾರತ್ ಅಭಿಯಾನ್’ ಅಡಿಯಲ್ಲಿ ಪ್ರಾರಂಭಿಸಿದ ಟಾಯ್ ಕಾಥಾನ್ – 2021 ಸ್ಪರ್ಧೆಯಲ್ಲಿ ಭಾಗವಹಿಸಿ ಸಲ್ಲಿಸಿದ ಹನ್ನೆರಡು ಪ್ರಸ್ತಾವನೆಗಳು ಅಂತಿಮ ಸುತ್ತಿಗೆ ಆಯ್ಕೆಯಾಗಿವೆ. ಈ ಸ್ಪರ್ಧೆಯು ರಾಷ್ಟ್ರವ್ಯಾಪಿ ಸ್ಪರ್ಧೆಯಾಗಿದ್ದು,  ಇದರಲ್ಲಿ ಭಾರತೀಯ ನಾಗರಿಕತೆ, ಇತಿಹಾಸ, ಸಂಸ್ಕೃತಿ, ಪುರಾಣ ಮತ್ತು ನೀತಿಗಳನ್ನು ಆಧರಿಸಿ  ಟಾಯ್ ಮತ್ತು ಆಟಗಳನ್ನು ಪರಿಕಲ್ಪನೆ ಮಾಡಲು ವಿದ್ಯಾರ್ಥಿಗಳಿಗೆ ಅವಕಾಶ ಕಲ್ಪಿಸಲಾಗಿದೆ.

error: Content is protected !!