ಗಾಂಜಾ : ಓರ್ವನ ಬಂಧನ

ದಾವಣಗೆರೆ, ಫೆ. 23- ಗಾಂಜಾ ಮಾರಾ ಟದ ಮೇಲೆ ದಾಳಿ ನಡೆ ಸಿರುವ ಇಲ್ಲಿನ ಸಿಇಎನ್ ಅಪರಾಧ ಠಾಣೆ ಪೊಲೀ ಸರು ಓರ್ವನನ್ನು ಬಂಧಿಸಿ, 20 ಸಾವಿರ ಮೌಲ್ಯದ 310 ಗ್ರಾಂ ಗಾಂಜಾ ಮತ್ತು 300 ರೂ. ನಗದು ವಶಪಡಿಸಿಕೊಂಡಿದ್ದಾರೆ. ಗದಗ ಜಿಲ್ಲೆ ಮುಂಡರಗಿ ತಾಲ್ಲೂಕಿನ ವೆಂಕಟಾಪುರ ಗ್ರಾಮದ ಮೌನೇಶ್ ಮಲ್ಲಪ್ಪ ಹರಣಿ ಬಂಧಿತ ಆರೋಪಿ. 

ಎಸ್ಪಿ ಹನುಮಂತರಾಯ, ಎಎಸ್ಪಿ ಎಂ. ರಾಜೀವ್ ಹಾಗೂ ಪೊಲೀಸ್ ಉಪಾಧೀಕ್ಷಕ ಬಿ.ಎಸ್. ಬಸವರಾಜ್  ಮಾರ್ಗದರ್ಶನದಲ್ಲಿ ಸಿಇಎನ್ ಅಪರಾಧ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕ ಬಿ.ವಿ. ಗಿರೀಶ್ ಹಾಗೂ ಸಿಬ್ಬಂದಿಗಳಾದ ಪಿ. ನಾಗಾರಾಜ್, ಎಸ್. ಲೋಹಿತ್, ಬಿ. ನಾಗರಾಜ್, ಮಲ್ಲಿಕಾರ್ಜುನ ಹಾದಿಮನಿ, ಕೊಟ್ರೇಶ್, ದ್ಯಾಮೇಶ್‍ ಒಳಗೊಂಡ ತಂಡ ಇಂದು ತಾಲ್ಲೂಕಿನ ಹಳೇಬಾತಿ ಗ್ರಾಮದಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ ವೇಳೆ ದಾಳಿ ನಡೆಸಿದೆ. ಈ ಸಂಬಂಧ ಸಿಇಎನ್ ಅಪರಾಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

error: Content is protected !!