ಹರಿಹರ ನಗರದ ಡಿ. ಸಿದ್ದಪ್ಪ ಅಂಡ್ ಸನ್ಸ್ ಕಿರಾಣಿ ಅಂಗಡಿ ಮತ್ತು ಶ್ರೀ ಸಿದ್ದೇಶ್ವರ ಪ್ಯಾಲೇಸ್ ಮಾಲೀಕರೂ ಹಾಗೂ ಖ್ಯಾತ ಉದ್ದಿಮೆದಾರರಾದ ಡಿ. ಹೇಮಂತ್ರಾಜ್ ಅವರ ಸಹೋದರರಾದ ಹಾಗೂ ಖ್ಯಾತ ಉದ್ಯಮಿ ಡಿ.ಯು. ಅರುಣ್ಕುಮಾರ್ ಅವರ ತಂದೆಯವರಾದ ಶ್ರೀ ಮಿಠಾಯಿ ಡಿ. ಉಜ್ಜೇಶ್ ಅವರು ದಿನಾಂಕ 21.02.2021ರ ಭಾನುವಾರ ತಡರಾತ್ರಿ 12.30 ಕ್ಕೆ ನಿಧನರಾದರೆಂದು ತಿಳಿಸಲು ವಿಷಾದಿಸುತ್ತೇವೆ. ಮೃತರಿಗೆ 65 ವರ್ಷ ವಯಸ್ಸಾಗಿತ್ತು. ಮೃತರು ಪತ್ನಿ, ಇಬ್ಬರು ಪುತ್ರಿಯರು, ಓರ್ವ ಪುತ್ರ, ಸಹೋದರರು, ಅಳಿಯಂದಿರು, ಸೊಸೆ, ಮೊಮ್ಮಕ್ಕಳು ಹಾಗೂ ಅಪಾರ ಬಂಧು-ಬಳಗವನ್ನು ಅಗಲಿದ್ದಾರೆ. ಮಿಠಾಯಿ ಡಿ. ಉಜ್ಜೇಶ್ ಅವರ ಅಂತ್ಯಕ್ರಿಯೆಯನ್ನು ದಿನಾಂಕ 22.02.2021ರ ಸೋಮವಾರ ಮಧ್ಯಾಹ್ನ 3 ಗಂಟೆಗೆ ಹರಿಹರ ನಗರದ ವೀರಶೈವ ರುದ್ರಭೂಮಿಯಲ್ಲಿ ನೆರವೇರಿಸಲಾಗುವುದು ಎಂದು ಕುಟುಂಬದವರು ತಿಳಿಸಿದ್ದಾರೆ.
July 23, 2024