ಬಿ.ಪಿ. ಹರೀಶ್‌ ಅಭಿಮಾನಿ ಬಳಗದಿಂದ ಬಡವರಿಗೆ ಊಟದ ವ್ಯವಸ್ಥೆ

ಹರಿಹರ, ಏ. 17- ಕೊರೊನಾ ವೈರಸ್ ರೋಗವನ್ನು ತಡೆಗಟ್ಟಲು ದೇಶದಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಲಾಕ್‌ಡೌನ್ ಘೋಷಣೆ ಮಾಡಿರುವುದರಿಂದ ನಗರದಲ್ಲಿ ಮಾಜಿ ಶಾಸಕ ಬಿ.ಪಿ. ಹರೀಶ್ ರವರ ಅಭಿಮಾನಿಗಳ ಬಳಗದ ವತಿಯಿಂದ ಕೈಲಾಸ ನಗರದ ಬಡ ನಿವಾಸಿಗಳಿಗೆ ಊಟದ ವ್ಯವಸ್ಥೆಯನ್ನು ಮಾಡಲಾಗಿತ್ತು.
ಈ ಸಂದರ್ಭದಲ್ಲಿ ಬಿಜೆಪಿ ಪಕ್ಷದ ಮುಖಂಡರಾದ ಮಾಲತೇಶಪ್ಪ ಕೆಂಚನಹಳ್ಳಿ, ತುಳಜಪ್ಪ ಭೂತೆ, ಅಜಿತ್ ಸಾವಂತ್, ಪ್ರವಿಣ್, ದೇವೇಂದ್ರಪ್ಪ ರಾಟಿ ರಮೇಶ್,  ನಗರಸಭೆ ಸದಸ್ಯ ರಜನಿಕಾಂತ್, ಇತರರು ಹಾಜರಿದ್ದರು.

error: Content is protected !!