ಸೋಮೇಶ್ವರ ವಿದ್ಯಾಲಯದಲ್ಲಿ ಲಸಿಕೆ ಅಭಿಯಾನ

ದಾವಣಗೆರೆ, ಏ.22- ನಗರದ ಸೋಮೇಶ್ವರ ವಿದ್ಯಾಲಯದಲ್ಲಿ ದಾವಣಗೆರೆ ಜಿಲ್ಲಾಡಳಿತ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಮಹಾನಗರ ಪಾಲಿಕೆ ಇವರ ಸಂಯುಕ್ತಾಶ್ರಯದಲ್ಲಿ ಶ್ರೀನಿವಾಸ್ ನಗರ, ಲೆನಿನ್ ನಗರ, ಮೌನೇಶ್ವರ ಬಡಾವಣೆ, ಹೆಚ್.ಕೆ.ಆರ್ ಸರ್ಕಲ್ ಹಾಗೂ ಇತರೆ ಬಡಾವಣೆಗಳ ನಿವಾಸಿಗಳ ಕೋವಿಡ್-19 ಲಸಿಕೆಗೆ ಶಾಸಕ ಎಸ್.ಆರ್.ರವೀಂದ್ರನಾಥ್ ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ವಿಧಾನ ಪರಿಷತ್ ಮಾಜಿ ಮುಖ್ಯ ಸಚೇತಕ ಡಾ. ಎ.ಹೆಚ್.ಶಿವಯೋಗಿಸ್ವಾಮಿ, ಪಾಲಿಕೆ ಸದಸ್ಯ ಕೆ.ಎಂ.ವೀರೇಶ್, ಸೋಮೇಶ್ವರ ವಿದ್ಯಾಲಯದ ಕಾರ್ಯ ದರ್ಶಿ ಕೆ.ಎಂ.ಸುರೇಶ್, ಕುರುಡಿ ಶಿವಕುಮಾರ್ ಹಾಗೂ ಮತ್ತಿತರರು ಉಪಸ್ಥಿತರಿದ್ದರು.

ಸೋಮೇಶ್ವರ ವಿದ್ಯಾಲಯದ ಅಧ್ಯಕ್ಷ ಅಶೋಕ್ ರೆಡ್ಡಿ, ಈ ಸಂದರ್ಭದಲ್ಲಿ ಲಸಿಕೆ ಪಡೆದುಕೊಂಡರು.

error: Content is protected !!