ದೂಡಾದಿಂದ 6ನೇ ವಾರ್ಡ್‌ನಲ್ಲಿ ಆಂಜನೇಯ ದೇವಸ್ಥಾನ ಪಾರ್ಕ್ ಉದ್ಘಾಟನೆ

ದಾವಣಗೆರೆ, ಜು.10- ದಾವಣಗೆರೆ – ಹರಿಹರ ನಗರಾಭಿವೃದ್ಧಿ ಪ್ರಾಧಿಕಾರದ ವತಿಯಿಂದ 6ನೇ ವಾರ್ಡ್ ಆಂಜನೇಯ ದೇವಸ್ಥಾನ ಪಾರ್ಕ್ ಉದ್ಘಾಟನೆ ನೆರವೇರಿತು. ಈ ಸಂದರ್ಭದಲ್ಲಿ ದೂಡಾ ಅಧ್ಯಕ್ಷ ರಾಜನಹಳ್ಳಿ ಶಿವಕುಮಾರ್, ಸಂಸದ ಜಿ.ಎಂ.ಸಿದ್ದೇಶ್ವರ, ಶಾಸಕ ಎಸ್.ಎ.ರವೀಂದ್ರನಾಥ್‌, ಜಿಲ್ಲಾ ಬಿಜೆಪಿ ಮಾಜಿ ಅಧ್ಯಕ್ಷ ಯಶವಂತ್‌ರಾವ್ ಜಾಧವ್, ಮಹಾನಗರ ಪಾಲಿಕೆ ಆರೋಗ್ಯ ಮತ್ತು ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷ ಎಲ್.ಡಿ.ಗೋಣೆಪ್ಪ, ಪಾಲಿಕೆ ಸದಸ್ಯರಾದ ಎಲ್.ಆರ್.ಶಿವಪ್ರಕಾಶ್, ಸೋಗಿ ಶಾಂತ ಕುಮಾರ್, ದೂಡಾ ಆಯುಕ್ತ ಕುಮಾರ್ ಹಾಗೂ ಮತ್ತಿತರರು ಉಪಸ್ಥಿತರಿದ್ದರು.

error: Content is protected !!