ಶಿವಸಿಂಪಿ ಸಮಾಜದಿಂದ ಸಿಎಂ ಪರಿಹಾರ ನಿಧಿಗೆ 58,500 ರೂ. ದೇಣಿಗೆ

ದಾವಣಗೆರೆ, ಏ. 30- ಜಿಲ್ಲಾ ಶಿವಸಿಂಪಿ ಸಮಾಜದಿಂದ ಕೋವಿಡ್-19 ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ 58,500 ರೂ.ಗಳ ದೇಣಿಗೆಯನ್ನು  ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಅವರ ಮೂಲಕ ಮುಖ್ಯಮಂತ್ರಿಗಳಿಗೆ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಸಮಾಜದ ಗೌರವಾಧ್ಯಕ್ಷ ಬೂಸ್ನೂರು ಗುರುಬಸಪ್ಪ, ಹೇಮಣ್ಣ ಜವಳಿ, ಕಣಕುಪ್ಪಿ ಮುರುಗೇಶಪ್ಪ, ಕಾರ್ಯದರ್ಶಿ ಪ್ರಕಾಶ್ ಬೂಸ್ನೂರು, ಖಜಾಂಚಿ ಬಾವಿಕಟ್ಟಿ ಜಗದೀಶ್, ಸಹ ಕಾರ್ಯದರ್ಶಿ  ಜ್ಞಾನೇಶ್ವರ್ ಜವಳಿ, ಮಾಧ್ಯಮ ಕಾರ್ಯದರ್ಶಿ ಬಿ.ಎಂ. ಶಿವಕುಮಾರ್ ಮುಂತಾದವರು ಹಾಜರಿದ್ದರು.

error: Content is protected !!