ಶಾಮನೂರು ಕುಟುಂಬದಿಂದ 15ನೇ ವಾರ್ಡಿನಲ್ಲಿ ಲಸಿಕಾ ಶಿಬಿರ

ದಾವಣಗೆರೆ, ಜು.10- ಹಿರಿಯ ಶಾಸಕ ಡಾ. ಶಾಮನೂರು ಶಿವಶಂಕರಪ್ಪ ಹಾಗೂ ಮಾಜಿ ಸಚಿವ ಶಾಮನೂರು ಮಲ್ಲಿಕಾರ್ಜುನ್‌ ಅವರು ನೀಡಿರುವ ಉಚಿತ ಕೊರೊನಾ ಲಸಿಕಾ ಶಿಬಿರವು ನಗರದ 15ನೇ ವಾರ್ಡ್‌ನ ದೇವರಾಜ ಅರಸು ಬಡಾವಣೆಯ ರೆಡ್ ಕ್ರಾಸ್ ಭವನದಲ್ಲಿ ನಿನ್ನೆ ನಡೆಯಿತು. 

ಈ ಸಂದರ್ಭದಲ್ಲಿ ಮಾಜಿ ಕೇಂದ್ರ ಸಚಿವ ಕೆ.ಹೆಚ್.ಮುನಿಯಪ್ಪ, ಮಾಜಿ ಸಚಿವ ಶಾಮನೂರು ಮಲ್ಲಿಕಾರ್ಜುನ್, ಕಾಂಗ್ರೆಸ್ ಮುಖಂಡ ಡಿ. ಬಸವರಾಜ್, ಪಾಲಿಕೆ ಸದಸ್ಯರಾದ ಎ.ನಾಗರಾಜ್, ಡಿ.ಎಸ್.ಆಶಾ, ಕೆ.ಎಸ್.ಬಸವಂತಪ್ಪ, ಅಯೂಬ್ ಪೈಲ್ವಾನ್, ಉಮೇಶ್, ಖಾದರ್, ಕೆ.ಎಂ.ವೀರಯ್ಯ ಸ್ವಾಮಿ, ನಟರಾಜ್ ಮತ್ತಿತರರಿದ್ದರು. 

error: Content is protected !!