ದಿನೇಶ್ ಕೆ ಶೆಟ್ಟಿ ಬಳಗದಿಂದ ಆಹಾರ ವಿತರಣೆ

ದಾವಣಗೆರೆ, ಏ.25- ನಗರದ ಸಿಜಿ ಆಸ್ಪತ್ರೆ ಬಳಿ ನಿರಾಶ್ರಿತರಿಗೆ ಮತ್ತು ರೋಗಿಗಳ  ಪೋಷಕರಿಗೆ  ದಿನೇಶ್ ಕೆ ಶೆಟ್ಟಿ ಅಭಿಮಾನಿ ಬಳಗದಿಂದ ಊಟದ ವ್ಯವಸ್ಥೆಯನ್ನು ಹಮ್ಮಿಕೊಳ್ಳಲಾಗಿತ್ತು.
ಬಳಗದ ಅಧ್ಯಕ್ಷ ದಿನೇಶ್ ಕೆ ಶೆಟ್ಟಿ ಮತ್ತು ಎ. ನಾಗರಾಜ್ ಊಟ ವಿತರಿಸಿದರು. ಈ ಸಂದರ್ಭದಲ್ಲಿ ಯುವರಾಜ್, ಶಿವಕುಮಾರ್ ಶೆಟ್ಟಿ, ಅನ್ಸರ್, ಧನುಷ್ ಶೆಟ್ಟಿ, ವಿವೇಕ್ ಎಸ್. ಆಲದಹಳ್ಳಿ, ಪವನ್ ಹಾಗು ಇನ್ನಿತರರಿದ್ದರು.

error: Content is protected !!