ರೆಡ್‌ಕ್ರಾಸ್‌ನಿಂದ ಕಿಟ್ ವಿತರಣೆ

ದಾವಣಗೆರೆ, ಜು. 10-  ನಗರದ ರೆಡ್ ಕ್ರಾಸ್ ಭವನದಲ್ಲಿ ಅಜೀಂ ಪ್ರೇಮಜೀ ಫೌಂಡೇಶನ್ ಹಾಗೂ ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಜಿಲ್ಲಾ ಶಾಖೆಯ ಸಹಭಾಗಿತ್ವದಲ್ಲಿ ಬಿ.ಪಿ.ಎಲ್. ಕಾರ್ಡ್ ಹೊಂದಿರುವ ಗರ್ಭಿಣಿ ಮಹಿಳೆಯರಿಗೆ ರೇಷನ್ ಕಿಟ್  ವಿತರಿಸಲಾಯಿತು.

ಪಾಲಿಕೆ ಆಯುಕ್ತ ವಿಶ್ವನಾಥ ಮುದಜ್ಜಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ರೆಡ್ ಕ್ರಾಸ್ ಸಂಸ್ಥೆಯ ಚೇರ್ಮನ್ ಡಾ. ಎ.ಎಂ. ಶಿವಕುಮಾರ್, ವೈಸ್ ಚೇರ್ಮನ್ ಡಿ.ಎಸ್. ಸಿದ್ದಣ್ಣ, ಪ್ರಧಾನ ಕಾರ್ಯ ದರ್ಶಿ ಉಮೇಶ್ ಶೆಟ್ಟಿ, ಕಾರ್ಯದರ್ಶಿ ಡಿ.ಎಸ್. ಸಾಗರ್, ನಿರ್ದೇಶಕ ರಾದ ಆನಂದಜ್ಯೋತಿ, ವಸಂತರಾಜು, ನರೇಂದ್ರಪ್ರಕಾಶ್, ಡಿ.ಎನ್. ಶಿವಾ ನಂದ, ರವಿಕುಮಾರ್, ಡಾ. ಧನಂಜಯ ಮೂರ್ತಿ, ಶ್ರೀಕಾಂತ್ ಬಗರೆ, ಕರಿಬಸಪ್ಪ, ಕೊಟ್ರೇಶ್, ಪೃಥ್ವಿ ಬಾದಾಮಿ, ರವೀಂದ್ರನಾಥ್, ಮಧುಕೇಶ್ವರ, ಜಿ.ಪಿ. ತೇಜಸ್, ಸಿ.ಎಂ. ಹರ್ಷ, ಕೆ.ಪಿ. ವಿವೇಕಾನಂದ ಮತ್ತಿತರರು ಉಪಸ್ಥಿತರಿದ್ದರು.

error: Content is protected !!