ಸಚಿವ ನಾರಾಯಣಸ್ವಾಮಿಗೆ ಅಭಿನಂದನೆ

ದಾವಣಗೆರೆ, ಜು. 10- ಕೇಂದ್ರ ಸಚಿವ ಸಂಪುಟದಲ್ಲಿ ಸಾಮಾಜಿಕ ನ್ಯಾಯ ಸಮಿತಿ ಮತ್ತು ಸಬಲೀಕರಣ ರಾಜ್ಯ ಖಾತೆಯ ಸಚಿವರಾಗಿ ಆಯ್ಕೆಯಾಗಿರುವ ಎ. ನಾರಾಯಣಸ್ವಾಮಿ ಅವರನ್ನು ನವದೆಹಲಿಯ ಸಚಿವರ ನಿವಾಸದಲ್ಲಿ ದಲಿತ ಮುಖಂಡ ಆಲೂರು ನಿಂಗರಾಜ್ ಇಂದು ಭೇಟಿ ಮಾಡಿ ಅಭಿನಂದಿಸಿದರು.

ಆಲೂರು ನಿಂಗರಾಜ್ ಮಾತನಾಡಿ, ದಲಿತ ವರ್ಗದ ಜನರಿಗೆ ಕೇಂದ್ರ ಸರ್ಕಾರದ ಸೌಲಭ್ಯಗಳು ಸಿಕ್ಕಿಲ್ಲ. ಎ.ನಾರಾಯಣಸ್ವಾಮಿ ಅವರು ಸಚಿವರಾ ಗಿರುವುದರಿಂದ ಇನ್ನು ಮುಂದಿನ ದಿನಗಳಲ್ಲಿ ಆ ಕೊರಗು ನೀಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ದಲಿತ ಮುಖಂಡರಾದ ಹೆಚ್.ವಿ. ಮಂಜುನಾಥ, ಚಿಕ್ಕಬಳ್ಳಾಪುರ ಗಂಗಾಧರ್, ನಾಗರಾಜ್ ಇದ್ದರು.

error: Content is protected !!