ಕೊಮಾರನಹಳ್ಳಿ : ಸ್ಮಶಾನಕ್ಕೆ ಅಗತ್ಯ ಸೌಲಭ್ಯ

ಶಾಸಕ ರಾಮಪ್ಪ ಭರವಸೆ

ಮಲೇಬೆನ್ನೂರು, ಏ.19- ಕೊಮಾರನಹಳ್ಳಿ ಗ್ರಾಮದ ತಿಮ್ಲಾಪುರ ರಸ್ತೆಯಲ್ಲಿರುವ ಸಾರ್ವಜನಿಕ ರುದ್ರಭೂಮಿಗೆ ಅವಶ್ಯವಿರುವ ತಂತಿ ಬೇಲಿ ಹಾಗೂ ಕುಡಿಯುವ ನೀರಿಗಾಗಿ ಬೋರ್‌ವೆಲ್‌ ವ್ಯವಸ್ಥೆ ಮಾಡುವುದಾಗಿ ಶಾಸಕ ಎಸ್‌. ರಾಮಪ್ಪ ಹೇಳಿದರು.

ಗ್ರಾ.ಪಂ ಸದಸ್ಯ ಎಂ.ಆರ್‌ ಬಸವರಾಜ್ ಅವರು ತಮ್ಮ ಸ್ವಂತ ಹಣದಲ್ಲಿ ರುದ್ರಭೂಮಿಯಲ್ಲಿ ಬೆಳೆದು ನಿಂತಿದ್ದ ಮುಳ್ಳುಗಿಡಗಳನ್ನು ಜೆಸಿಬಿ ಮೂಲಕ ಸ್ವಚ್ಛಗೊಳಿಸುವ ಕಾಮಗಾರಿ ವೀಕ್ಷಿಸಿದ ನಂತರ ಗ್ರಾಮಸ್ಥರೊಂದಿಗೆ ರುದ್ರಭೂಮಿ ಅಭಿವೃದ್ಧಿ ಪಡಿಸುವ ಕುರಿತು ಚರ್ಚಿಸಿದರು.  ಸಾರ್ವಜನಿಕ ರುದ್ರಭೂಮಿ ಯನ್ನು ಸ್ವಂತ ಹಣದಲ್ಲಿ ಸ್ವಚ್ಛಗೊಳಿಸುವ ಮೂಲಕ ಗ್ರಾ.ಪಂ ಸದಸ್ಯ ಬಸ ವರಾಜ್‌ ಎಲ್ಲರಿಗೂ ಮಾದರಿಯಾಗಿದ್ದಾರೆ ಎಂದು ಶಾಸಕ ರಾಮಪ್ಪ ಮೆಚ್ಚುಗೆ ವ್ಯಕ್ತಪಡಿಸಿದರು.

ಎಪಿಎಂಸಿ ನಿರ್ದೇಶಕ ಜಿ. ಮಂಜುನಾಥ್‌ ಪಟೇಲ್‌, ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಎಂ.ಬಿ. ಅಬೀದ್‌ ಅಲಿ, ಗ್ರಾ.ಪಂ ಮಾಜಿ ಅಧ್ಯಕ್ಷ ಎಸ್‌.ಎಂ. ಮಂಜುನಾಥ್‌, ಪರಮೇಶ್ವರನಾಯ್ಕ್‌, ಹೋಟೆಲ್‌ ಪರಮೇಶ್ವರಪ್ಪ ಕರ್ಜಗಿ ಮಹೇಶ್ವರಪ್ಪ, ಪೂಜಾರ್‌ ಚಂದ್ರಪ್ಪ, ಬಿ.ಎಲ್‌. ರಂಗನಾಥ್‌, ಅಣ್ಣೇಶ್‌ ಮತ್ತಿತರರು ಈ ವೇಳೆ ಹಾಜರಿದ್ದರು.

error: Content is protected !!