ಕೊರೊನಾ ಜಾಗೃತಿ ಅಭಿಯಾನ

ದಾವಣಗೆರೆ, ಮೇ 21- ಕೊರೊನಾ ಬಗ್ಗೆ ಜಾಗೃತಿ ಅಭಿಯಾನ ವನ್ನು ವಿದ್ಯಾನಗರದ ವಿನಾಯಕ ಬಡಾವಣೆಯ ಎಲ್ಲಾ ಕಾಲೋನಿಗಳಲ್ಲಿ ಜಾಗೃತಿ ಅಭಿಯಾನ ನಡೆಸಿ, ಹೇಗೆ ಎಚ್ಚರಿಕೆಯಿಂದ ಇರಬೇಕೆಂದು ಅರಿವು ಮೂಡಿಸಲಾಯಿತು. ಅಭಿಯಾನ ಪ್ರೊ|| ಪರಶುರಾಮ್‌ ಅವರ ನೇತೃತ್ವದಲ್ಲಿ ನಡೆಯಿತು. ವಜ್ರೇಶ್ವರಿ ಮಹಿಳಾ ಸಂಸ್ಥೆಯ ನಿರ್ದೇಶಕರಾದ ಪದ್ಮ ಪರಶುರಾಮ್, ರೆಡ್‌ ಕ್ರಾಸ್‌ನ ಕರಿಬಸಪ್ಪ ಅಭಿಯಾನದಲ್ಲಿ ಭಾಗವಹಿಸಿದ್ದರು.

error: Content is protected !!