ಮೋಜಿಣಿ ತಂತ್ರಾಂಶ: ಅಳತೆ ಕಾರ್ಯ ತಾತ್ಕಾಲಿಕ ಸ್ಥಗಿತಕ್ಕೆ ನಿರ್ಧಾರ

ದಾವಣಗೆರೆ, ಫೆ.16- ಕರ್ನಾಟಕ ರಾಜ್ಯ ಸರ್ಕಾರಿ ಪರವಾನಗಿ  ಸಂಘದ ನಿರ್ಧಾರದಂತೆ ಬೇಡಿಕೆಗಳು ಈಡೇರಿಸುವವರೆಗೆ ರಾಜ್ಯಾದ್ಯಂತ ಮೋಜಿಣಿ ತಂತ್ರಾಂಶದಲ್ಲಿ ಬರುವ ಎಲ್ಲಾ ಆಡಳಿತ ಕಾರ್ಯಗಳನ್ನು ಸ್ಥಗಿತಗೊಳಿಸಲು ನಿರ್ಧರಿಸಿರುವುದಾಗಿ ಭೂ ದಾಖಲೆಗಳ ಸಹಾಯಕ ನಿರ್ದೇಶಕರಿಗೆ ಸಂಘದ ಪರವಾಗಿ ಮನವಿ ಸಲ್ಲಿಸಲಾಯಿತು.

ಈ ಹಿಂದೆ ಮುಷ್ಕರ ಕೈಗೊಂಡಾಗ ಪ್ರತಿಭಟನಾ ಸ್ಥಳಕ್ಕೆ ಆಯುಕ್ತರು ಆಗಮಿಸಿ, ನಮ್ಮ ಬೇಡಿಕೆಗಳನ್ನು ಸರ್ಕಾರದ ಗಮನಕ್ಕೆ ತಂದು ಈಡೇರಿಸಲು ಶ್ರಮಿಸುವುದಾಗಿ ಭರವಸೆ ನೀಡಿದ್ದರು. ಆದರೆ ಇದುವರೆಿವಿಗೂ ಈಡೇರದ ಕಾರಣ ಆಯುಕ್ತರು ನಮ್ಮ ಬೇಡಿಕೆಗಳನ್ನು ಈಡೇರಿಸುವವರೆಗೆ ತಾಲ್ಲೂಕಿನ ಎಲ್ಲಾ ಪರವಾನಗಿ ಭೂಮಾಪಕರುಗಳು ರಾಜ್ಯ ಪರವಾನಗಿ ಭೂಮಾಪಕರ ಸಂಘದ ನಿರ್ದೇಶನ ಬರುವವರೆಗೂ ಮೋಜಿಣಿ ತಂತ್ರಾಂಶದ ಅಳತೆ ಕಾರ್ಯಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸುವುದಾಗಿ ತಿಳಿಸಿದ್ದಾರೆ.

ಮನವಿಯನ್ನು ಜಿ.ವಿ. ರಾಜಶೇಖರ್ ಸೇರಿದಂತೆ ತಾಲ್ಲೂಕಿನ ಪರವಾನಗಿ ಭೂಮಾಪಕರುಗಳು ಹಾಜರಿದ್ದರು.

error: Content is protected !!