ನಿವೃತ್ತ ಸ್ಟಾಫ್ ನರ್ಸ್ ಮನೆಗೆ ಕನ್ನ

ದಾವಣಗೆರೆ, ಏ.19- ಮನೆ ಬೀಗ ಮುರಿದು ಕನ್ನ ಹಾಕಿರುವ ಕಳ್ಳರು, ಬೆಳ್ಳಿ – ಬಂಗಾರವನ್ನು ದೋಚಿರುವ ಘಟನೆ ಸ್ಥಳೀಯ ಜಯನಗರ ‘ಎ’ ಬ್ಲಾಕ್ ನ ರೆಡ್ಡಿ ಬಿಲ್ಡಿಂಗ್ ಬಳಿ ನಡೆದಿದೆ.

ನಿವೃತ್ತ ಸ್ಟಾಫ್ ನರ್ಸ್ ರಾಧಾ ಎಂಬುವರು ಶನಿವಾರ ತಮ್ಮ ಮನೆಗೆ ಬೀಗ ಹಾಕಿಕೊಂಡು ಊರಿಗೆ ಹೋಗಿದ್ದರು. ಮನೆಗೆ ಬೀಗ ಹಾಕಿರುವುದನ್ನು ಗಮನಿಸಿರುವ ಕಳ್ಳರು, ಆಯುಧದಿಂದ ಬಾಗಿಲು ಮೀಟಿ ಒಳನುಗ್ಗಿ ಮೂರುವರೆ ಕೆಜಿ ಬೆಳ್ಳಿ ಮತ್ತು 49 ಗ್ರಾಂ ಬಂಗಾರವನ್ನು ಕಳವು ಮಾಡಿದ್ದಾರೆ.

ಇಂದು ಕಳ್ಳತನ ಬೆಳಕಿಗೆ ಬಂದಿದ್ದು, ಕೆಟಿಜೆ ನಗರ ಪೊಲೀಸರು ಘಟನಾ ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿ ದ್ದಾರೆ. ಶ್ವಾನ ದಳ ಹಾಗೂ ಬೆರಳಚ್ಚು ತಂಡ ಪರಿಶೀಲಿಸಿದೆ. 10 ಕೆಜಿ ಬೆಳ್ಳಿ ಮತ್ತು 2 ಕೆಜಿಯಷ್ಟು ಚಿನ್ನವನ್ನು ಈಕೆ ಸೇಫ್ಟಿ ಲಾಕರ್ ನಲ್ಲಿಟ್ಟಿದ್ದರಿಂದ ಕಳ್ಳರ ಪಾಲಾಗದೇ ಉಳಿದಿವೆ. ಸುರಕ್ಷಿತವಾದ ಡೋರ್ ಲಾಕ್ ಇಲ್ಲ. ಸಿಸಿಟಿವಿಯನ್ನಾಗಲೀ ಅಳವಡಿಸಿದ್ದರೆ ಕಳ್ಳರ ಸುಳಿವು ಪತ್ತೆಗೆ ಅನುಕೂಲವಾಗುತ್ತಿತ್ತು ಎನ್ನುತ್ತಾರೆ ಪೊಲೀಸರು. 

error: Content is protected !!