ರಣಜಿ ಆಟಗಾರ ಕೃತಿಕ್‌ಗೆ ಸನ್ಮಾನ

ದಾವಣಗೆರೆ, ಏ.18- ಮುಂಬಯಿ ರಣಜಿ ಕ್ರಿಕ್ರೆಟ್ ಆಟಗಾರ ಹನಗವಾಡಿ ಗ್ರಾಮದ ಕೃತಿಕ್ ಅವರನ್ನು ನಗರದ ಎಂಬಿಎ ಕ್ರೀಡಾಂಗಣದಲ್ಲಿ  ಬುಧವಾರ ನಡೆದ ಕೆಎಸ್‌ಸಿಎ ವತಿಯಿಂದ ನಡೆದ ಚಳ್ಳಕೆರೆ-ಹರಿಹರ ತಂಡಗಳ ನಡುವಿನ ಕ್ರಿಕೆಟ್ ಆಟದ ಸಂದರ್ಭದಲ್ಲಿ ಮಾಜಿ ಶಾಸಕ ಬಿ.ಪಿ. ಹರೀಶ್ ಅವರು ಸನ್ಮಾನಿಸಿ, ಗೌರವಿಸಿದರು.

ಐಪಿಎಲ್ ಆಯ್ಕೆಯಲ್ಲೂ ಭಾಗವಹಿಸಿದ್ದ ಕೃತಿಕ್ ಅವರು ಹರಿಹರ ತಾಲ್ಲೂಕಿಗೆ ಕೀರ್ತಿ ತಂದಿದ್ದಾರೆ ಎಂದು ಹರೀಶ್ ಶ್ಲಾಘಿಸಿದರು. ನಂತರ ಕೃತಿಕ್ವ ಹರಿಹರ, ಚಳ್ಳಕೆರೆ ತಂಡಗಳ ಆಟಗಾರರೊಂದಿಗೆ ತಮ್ಮ ಅನುಭವ ಹಂಚಿಕೊಂಡರು.

ಕೆಎಸ್‌ಸಿಎ ತುಮಕೂರು ವಿಭಾಗದ ಕನ್ವೀನರ್ ಶಶಿಧರ್, ಎನ್ಐಎಸ್ ತರಬೇತುದಾರ ಗೋಪಾಲಕೃಷ್ಣ, ಹರಿಹರ ನಗರಸಭೆ ಸದಸ್ಯರಾದ ರಜನಿ, ರಾಘವೇಂದ್ರ ಇನ್ನಿತರರು ಹಾಜರಿದ್ದರು.

error: Content is protected !!