ಗೌತಮ್ ಸೊಸೈಟಿಯಲ್ಲಿ ಅಂಬೇಡ್ಕರ್ ಜಯಂತಿ

ದಾವಣಗೆರೆ, ಏ.16- ನಗರದ ಗೌತಮ್ ಕೋ-ಆಪ್ ಸೊಸೈಟಿಯಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ಅವರ ಜಯಂತ್ಯೋತ್ಸವ ಆಚರಿಸಲಾಯಿತು.

ಹೊಂಡದ ರಸ್ತೆ ಶಾಲೆಯ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷ ಕೆ.ಸಿ. ಮೋಹನ್ ಕುಮಾರ್ ಮಾತನಾಡಿ, ಬಾಬಾ ಸಾಹೇಬರು ಸಮ ಸಮಾಜಕ್ಕೆ ನಡೆಸಿದ ಹೋರಾಟದಲ್ಲಿ ಮೀಸಲಾತಿ ಪ್ರಮುಖ ಅಸ್ತ್ರವಾಗಿದ್ದು, ಅದು ಈ ಮಾರುಕಟ್ಟೆಯ ಸರಕಾಗಿರುವುದು ಖೇದನೀಯ ಎಂದರು.

ಸೊಸೈಟಿ ಅಧ್ಯಕ್ಷ ರಾಘವೇಂದ್ರ, ಉಪನ್ಯಾಸಕ ರಾಮಚಂದ್ರ ಅಂಬೇಡ್ಕರ್ ಅವರ ಆದರ್ಶ ಜೀವನವನ್ನು ಸ್ಮರಿಸಿದರು. ನಿವೃತ್ತ ಎಸ್.ಪಿ. ರುದ್ರಮುನಿ ಮಾತನಾಡಿದರು. 

ಕಾರ್ಯಕ್ರಮದಲ್ಲಿ ಡಾ. ರಮೇಶ್, ಭೀಮಣ್ಣ, ಪ್ರಸಾದ್, ಓಂಕಾರಪ್ಪ, ಎಲ್.ಟಿ. ಮಧುಸೂದನ್, ಸರೋಜ, ವಿಮಲ ಇನ್ನಿತರರು ಭಾಗವಹಿಸಿದ್ದರು.

error: Content is protected !!