ನಗರದಲ್ಲಿ ರಾಮಾರ್ಜುನ ಚಿತ್ರತಂಡ

ದಾವಣಗೆರೆ, ಫೆ.12 – ನಾಯಕ ನಟ ಅನೀಶ್ ನಟಿಸಿ ನಿರ್ದೇಶಿಸಿ ಮತ್ತು ನಿರ್ಮಿಸಿರುವ ರಾಮಾರ್ಜುನ ಚಲನಚಿತ್ರದ ಪ್ರಚಾರಕ್ಕಾಗಿ ಚಿತ್ರತಂಡದೊಂದಿಗೆ  ನಗರಕ್ಕೆ ಆಗಮಿಸಿದ್ದರು. 

ಈ ಸಂದರ್ಭದಲ್ಲಿ ಮಾತನಾಡಿದ ಅನೀಶ್ ಚಿತ್ರವನ್ನು ತುಂಬಾ ಕಷ್ಟಪಟ್ಟು ನಿರ್ಮಿಸಿದ್ದೇನೆ, ಚಿತ್ರವನ್ನು‌ ಪ್ರೇಕ್ಷಕರು ಥಿಯೇಟರ್‌ಗೆ ಬಂದು ನೋಡಿ ಹಾರೈಸಬೇಕು. ಅದರಲ್ಲೂ ನನ್ನ ಅಭಿಮಾನಿಗಳಿಂದ ಚಿತ್ರಕ್ಕೆ ಉತ್ತಮ ಪ್ರತಿಕ್ರಿಯೆ ದೊರಕುತ್ತಿದೆ ಎಂದರು.

ಈ ಸಂದರ್ಭದಲ್ಲಿ ಸ್ಥಳೀಯ ನಟ ಮನೋಜ್ ಪೂಜಾರ್ ಮಾತನಾಡಿ, ದಾವಣಗೆರೆಯಲ್ಲಿ ಚಿತ್ರಕ್ಕೆ ಉತ್ತಮ ಪ್ರತಿಕ್ರಿಯೆ ಸಿಗುತ್ತಿದೆ, ನಾಯಕ ನಟ ಅನೀಶ್ ಅವರು ಉತ್ತಮ ಕಲಾವಿದರು. ಜೊತೆಗೆ ನಾಯಕಿ ನಿಶ್ವಿಕಾ ಅವರು ಈಗಾಗಲೇ ಕನ್ನಡದ ಹಲವು ಚಿತ್ರಗಳಲ್ಲಿ ನಟಿಸಿದ್ದಾರೆ. ರಾಮಾರ್ಜುನದಲ್ಲಿ ತುಂಬಾ ಚೆನ್ನಾಗಿ ನಟಿಸಿದ್ದಾರೆ ಎಂದರು. ಈ ಸಂದರ್ಭದಲ್ಲಿ ಚಿತ್ರದ ನಾಯಕ ನಟಿ ನಿಶ್ವಿಕಾ ಹಂಚಿಕೆದಾರರಾದ ಗುಡ್ಡಪ್ಪ ಮತ್ತು ಬಸವರಾಜ ಜಿ.ವಿ. ಅರ್ಜುನ್ ಇದ್ದರು.

error: Content is protected !!