ಆಕಸ್ಮಿಕ ಬೆಂಕಿ: ಹೊತ್ತಿ ಉರಿದ ಎರಡು ಮನೆಗಳು

ಆಕಸ್ಮಿಕ ಬೆಂಕಿ: ಹೊತ್ತಿ ಉರಿದ ಎರಡು ಮನೆಗಳು - Janathavaniದಾವಣಗೆರೆ, ಏ.16- ಆಕಸ್ಮಿಕವಾಗಿ ಬೆಂಕಿ ಅವಘಡ ಸಂಭವಿಸಿದ ಪರಿಣಾಮ ಅಕ್ಕಪಕ್ಕದಲ್ಲಿನ ಎರಡು ಮನೆಗಳು ಹೊತ್ತಿ ಉರಿದ ಘಟನೆ ನಗರದ ಬಸವನಗರ ಪೊಲೀಸ್ ಠಾಣಾ ವ್ಯಾಪ್ತಿಯ ಹುಬ್ಬಳ್ಳಿ ಚೌಡಪ್ಪನ ಓಣಿಯಲ್ಲಿಂದು ನಡೆದಿದೆ.

ಬಸವರಾಜಪೇಟೆಯ ಆಟೋ ಚಾಲಕ ಸಿಕಂದರ್ ಹಾಗೂ ಜಲೀಲ್ ಎಂಬುವರ ಮನೆಗಳಲ್ಲಿ ಬೆಂಕಿ ಅನಾಹುತ ಸಂಭವಿಸಿದ್ದು ಪಾತ್ರೆ – ಪಡಗ, ಬಟ್ಟೆ, ಚಿನ್ನ-ಬೆಳ್ಳಿ ಸೇರಿದಂತೆ ಗೃಹ ಬಳಕೆಯ ವಸ್ತುಗಳು ಭಾಗಶಃ ಬೆಂಕಿಹಾಗುತಿಯಾಗಿವೆ. ಅಲ್ಲದೇ ರಂಜಾನ್ ಹಬ್ಬಕ್ಕೆ ಕೂಡಿಟ್ಟಿದ್ದ ಹಣ ಭಸ್ಮವಾಗಿದೆ. ಅದೃಷ್ಟವಶಾತ್ ಯಾವುದೇ ಜೀವ ಹಾನಿ ಸಂಭವಿಸಿಲ್ಲ. 

ವಿಷಯ ತಿಳಿದಾಕ್ಷಣ ಘಟನಾ ಸ್ಥಳಕ್ಕಾಗಮಿಸಿದ ಅಗ್ನಿ ಶಾಮಕ ತಂಡವು ಬೆಂಕಿ ನಂದಿಸಿ ಹೆಚ್ಚಿನ ಅನಾಹುತ ತಪ್ಪಿಸಿದೆ. ಅಡುಗೆ ಅನಿಲದ ಸಿಲಿಂಡರ್ ರೀಫಿಲ್ ಮಾಡುವಾಗ ಈ ಅವಘಡ ಸಂಭವಿಸಿದೆ ಎಂದು ಮೇಲ್ನೋಟಕ್ಕೆ ಕಂಡು ಬರುತ್ತಿದೆ ಎನ್ನಲಾಗಿದೆ. ಅಡುಗೆ ಮಾಡುವಾಗ ಅಗ್ನಿ ದುರಂತವಾಗಿರುವುದಾಗಿ ಮನೆ ಮಾಲೀಕರು ತಿಳಿಸಿದ್ದಾರೆಂದು ಹೇಳಲಾಗಿದೆ.

error: Content is protected !!