ಹರಿಹರ ತಾ. : 56 ಹಳ್ಳಿಗಳ ಪ್ರತಿ ಮನೆಗೂ ಕುಡಿಯುವ ನೀರಿನ ಸಂಪರ್ಕ

ಹೊಸಹಳ್ಳಿಯಲ್ಲಿ ಶಾಸಕ ರಾಮಪ್ಪ

ಮಲೇಬೆನ್ನೂರು, ಏ.12- ಹೊಸಹಳ್ಳಿ ಮತ್ತು ಕಮಲಾಪುರ ಗ್ರಾಮಗಳಲ್ಲಿ ಪ್ರತಿ ಮನೆಗೂ ಕುಡಿಯುವ ನೀರು ಪೂರೈಸುವ ಸುಮಾರು 56 ಲಕ್ಷ ರೂ. ವೆಚ್ಚದ ಕಾಮಗಾರಿಗೆ ಶಾಸಕ ಎಸ್‌. ರಾಮಪ್ಪ ಅವರು ಸೋಮವಾರ ಹೊಸಹಳ್ಳಿ ಗ್ರಾಮದಲ್ಲಿ ಗುದ್ದಲಿ ಪೂಜೆ ನೆರವೇರಿಸಿ, ಚಾಲನೆ ನೀಡಿದರು.

ನಂತರ ಮಾತನಾಡಿದ ಶಾಸಕರು, ಜಲಜೀವನ್ ಮಿಷನ್‌ ಯೋಜನೆಯಡಿ ಹರಿಹರ ತಾಲ್ಲೂಕಿನ 56 ಹಳ್ಳಿಗಳಿಗೆ ಸುಮಾರು 52 ಕೋಟಿ ರೂ. ಅನುದಾನ ಬಿಡುಗಡೆಯಾಗಿದ್ದು, ಮನೆ ಮನೆಗೂ ನೀರು ಒದಗಿಸುವ ಕಾಮಗಾರಿಯನ್ನು 28 ಹಳ್ಳಿಗಳಲ್ಲಿ ಕೈಗೆತ್ತಿಕೊಳ್ಳಲು ಟೆಂಡರ್‌ ಆಗಿದೆ. ನೀರು ಪೂರೈಸುವ ಈ ಯೋಜನೆ ಯನ್ನು ಇನ್ನುಳಿದ ಹಳ್ಳಿಗಳಿಗೆ ವಿಸ್ತರಿಸಲು ಯೋಜನೆಯು ಟೆಂಡರ್‌ ಪ್ರಕ್ರಿಯೆಯ ಲ್ಲಿದೆ ಎಂದರು. ವೇಮನಗುರು ಪೀಠದ ಶ್ರೀ ಬಸವಕುಮಾರ ಸ್ವಾಮೀಜಿ, ಹೊಸ ಹಳ್ಳಿಯ ಸಂಜೀವಪ್ಪ ರೆಡ್ಡಿ, ಕಮಲಾಪುರದ ದೊಡ್ಡಬಸಪ್ಪ, ಷಣ್ಮುಖಪ್ಪ, ನಂದಿ ಗಾವಿ ರಾಜಣ್ಣ, ಗ್ರಾಮೀಣ ಕುಡಿಯುವ ನೀರು ಸರಬರಾಜು ಇಲಾಖೆಯ ಎಇಇ ಗಂಗಾಧರಪ್ಪ ಸೇರಿದಂತೆ ಗ್ರಾ.ಪಂ ಸದಸ್ಯರು, ಗ್ರಾಮಸ್ಥರು ಈ ವೇಳೆ ಹಾಜರಿದ್ದರು.

error: Content is protected !!