ಎಸ್ಸೆಸ್,ಎಸ್ಸೆಸ್ಸೆಂ ಅವರಿಂದ ಲೆಕ್ಕಪರಿಶೋಧಕರಿಗೆ ಲಸಿಕಾ ಶಿಬಿರ

ದಾವಣಗೆರೆ, ಜು.4 – ಶಾಸಕ ಡಾ|| ಶಾಮನೂರು ಶಿವಶಂಕರಪ್ಪ ಮತ್ತು ಎಸ್.ಎಸ್. ಮಲ್ಲಿಕಾರ್ಜುನ್ ಅವರು ನೀಡುತ್ತಿರುವ ಕೋವಿಡ್ ಉಚಿತ ಲಸಿಕಾ ಶಿಬಿರವು  ಜಿಲ್ಲೆಯ ಲೆಕ್ಕಪರಿಶೋಧಕರಿಗಾಗಿ ನಗರದ ರೋಟರಿ ಬಾಲಭವನದಲ್ಲಿ  ನಡೆಯಿತು. ಲಸಿಕಾ ಕೇಂದ್ರಕ್ಕೆ ಭೇಟಿ ನೀಡಿದ್ದ ಎಸ್ಸೆಸ್, ಲಸಿಕೆ ಪಡೆದ ಲೆಕ್ಕಪರಿಶೋಧಕರು ಮತ್ತವರ ಕುಟುಂಬದ ಆರೋಗ್ಯವನ್ನು ವಿಚಾರಿಸಿದರು. ಈ ಸಂದರ್ಭದಲ್ಲಿ ಹಿರಿಯ ಲೆಕ್ಕಪರಿಶೋಧಕ ಉದ್ಯಮಿ ಅಥಣಿ ವೀರಣ್ಣ, ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ದಿನೇಶ್ ಕೆ. ಶೆಟ್ಟಿ, ಲೆಕ್ಕಪರಿಶೋಧಕರ ಸಂಘದ ಅಧ್ಯಕ್ಷ ಉಮೇಶ್ ಶೆಟ್ಟಿ ಹಾಗೂ ಪದಾಧಿಕಾರಿಗಳು ಉಪಸ್ಥಿತರಿದ್ದರು.

error: Content is protected !!