ವಿಜಯನಗರ ಜಿಲ್ಲಾ ಘೋಷಣೆ ಹರಪನಹಳ್ಳಿಯಲ್ಲಿ ಪಟಾಕಿ ಸಿಡಿಸಿ ಸಂಭ್ರಮ

ಹರಪನಹಳ್ಳಿ, ಫೆ.8 – ಪಟ್ಟಣದ ಪ್ರವಾಸಿಮಂದಿರ ವೃತ್ತದ ಬಳಿ ಸಾರ್ವಜನಿಕರು ಸೋಮವಾರ ವಿಜಯನಗರ ಜಿಲ್ಲಾ ಘೋಷಣೆ ಪ್ರಕಟವಾಗುತ್ತಿದ್ದಂತೆ ಪಟಾಕಿ ಸಿಡಿಸಿ ಸಂಭ್ರಮಿಸಿದ್ದಾರೆ.

ಕಣಿವಿಹಳ್ಳಿ ಮಂಜುನಾಥ್ ಮಾತನಾಡಿ ನಮಗೆ ಬಳ್ಳಾರಿ ಜಿಲ್ಲೆ ದೂರವಾಗುತ್ತಿತ್ತು, ಸರ್ಕಾರ ವಿಜಯನಗರ ಜಿಲ್ಲೆಗೆ ಸೇರಿಸಿ ಅಲ್ಪಮಟ್ಟಿಗೆ ಸಂತಸ ತಂದಿದೆ, ಮುಂದಿನ ದಿನಗಳಲ್ಲಿ ತಾಲೂಕನ್ನು ಶೈಕ್ಷಣಿಕ ಜಿಲ್ಲೆಯಾಗಿ ಘೋಷಣೆ ಮಾಡಬೇಕು ಎಂದು ಆಗ್ರಹಿಸಿದರು.

ಈ ಸಂದರ್ಭದಲ್ಲಿ ರಮೇಶ್‍ ಹುಲಿ, ಬೇವಿನಹಳ್ಳಿ ವೆಂಕಟೇಶ್, ವಕೀಲ ರವಿನಾಯ್ಕ, ಎ.ಕೆ.ಸೋಮಪ್ಪ, ಈರಣ್ಣ ಕಣಿವಿಹಳ್ಳಿ, ಸಿದ್ದಪ್ಪ ರಡ್ಡೇರ್, ಕೆ.ಜಗದೀಶ, ಮೈದೂರು ಲೋಕೇಶ್ ಸೇರಿದಂತೆ ಇತರರು ಇದ್ದರು.

error: Content is protected !!