ಪುತ್ರನ ಜನ್ಮದಿನಕ್ಕೆ ಪೌರ ಕಾರ್ಮಿಕರಿಗೆ ವಿಮೆ ಮಾಡಿಸಿದ ಪಾಲಿಕೆ ಸದಸ್ಯೆ

ದಾವಣಗೆರೆ, ಜು.2- ಮಹಾನಗರ ಪಾಲಿಕೆಯ 42ನೇ ವಾರ್ಡಿನ ಸದಸ್ಯರಾದ ಶ್ರೀಮತಿ ಗೌರಮ್ಮ ಗಿರೀಶ್ ಅವರು ತಮ್ಮ ಪುತ್ರ ಸಚಿನ್ ಜನ್ಮ ದಿನಕ್ಕೆ ತಮ್ಮ ವಾರ್ಡಿನ ಪೌರ ಕಾರ್ಮಿಕರಿಗೆ ಮುಂದಿನ 3 ವರ್ಷಗಳ ವಿಮಾ ಮೊತ್ತವನ್ನು ಉಡುಗೊರೆಯಾಗಿ ಪಾವತಿಸಿಸುವು ದರ ಮೂಲಕ ಸ್ವಚ್ಛತಾ ಸಿಬ್ಬಂದಿಗಳನ್ನು ಗೌರವಿಸಿದ್ದಾರೆ.

ಮುಂದಿನ 3 ವರ್ಷಗಳ ಅವಧಿಯಲ್ಲಿ ಪೌರ ಕಾರ್ಮಿಕರಿಗೆ ಮರಣ ಹೊಂದಿದ್ದಲ್ಲಿ, 5 ಲಕ್ಷ ರೂ.ಗಳ ವಿಮಾ ಮೊತ್ತ ಅವರ ಕುಟುಂಬಕ್ಕೆ ನೀಡಲಾಗುತ್ತದೆ.

ಕೊರೊನಾದಂತಹ ಸಂದಿಗ್ಧ ಪರಿಸ್ಥಿತಿಯಲ್ಲಿಯೂ    ನಗರವನ್ನು ಸ್ವಚ್ಛಗೊಳಿಸುತ್ತಾ, ನಿರಂತರ ಸಾರ್ವಜನಿಕರ ಸೇವೆ ಮಾಡುತ್ತಿರುವ ಸ್ವಚ್ಛತಾ ಸಿಬ್ಬಂದಿಗೆ ತಾವು ಕಿರುಕಾಣಿಕೆ ನೀಡಿರುವುದಾಗಿ ಗೌರಮ್ಮ ಸಂತಸ ವ್ಯಕ್ತಪಡಿಸಿದ್ದಾರೆ.

ವಿಮಾ ಪತ್ರವನ್ನು ನಗರ ಪಾಲಿಕೆಯ ಮಹಾಪೌರ ಎಸ್.ಟಿ.ವೀರೇಶ್ ಅವರು ಪೌರ ಕಾರ್ಮಿಕರಿಗೆ ವಿತರಿಸಿದರು. ಈ ಸಂದರ್ಭದಲ್ಲಿ ಪಾಲಿಕೆ ಸದಸ್ಯ ಪ್ರಸನ್ನಕುಮಾರ್,  ವಾರ್ಡಿನ ವಿನಯ್, ಜಯಪ್ರಕಾಶ್, ನರೇಂದ್ರ ಕುಮಾರ್, ಗಿರೀಶ್, ಸಚಿನ್, ನಾರಪ್ಪ ಹಾಗೂ ಪೌರ ಕಾರ್ಮಿಕರು ಉಪಸ್ಥಿತರಿದ್ದರು.

error: Content is protected !!