ರಾಮ ಮಂದಿರಕ್ಕೆ ಇಂದ್ರಪ್ಪ ಗೌಡ್ರು ಲಕ್ಷ ರೂ.

ದಾವಣಗೆರೆ, ಫೆ. 6 – ಶ್ರೀನಿತ್ಯ ಚೇತನಾ ಚಿಟ್ಸ್ ಪ್ರೈ. ಲಿಮಿಟೆಡ್‌ ಮ್ಯಾನೇಜಿಂಗ್‌ ಡೈರೆಕ್ಟರ್‌ ಹಾಗೂ ಶ್ರೀ ಲಕ್ಷ್ಮಿ ವೆಂಕಟೇಶ್ವರ ಗ್ರಾನೈಟ್‌ ಮಾಲೀಕರೂ, ಬಿಜೆಪಿ ಮುಖಂಡರೂ ಆದ ಇಂದ್ರಪ್ಪ ಗೌಡ್ರು ಶ್ರೀ ರಾಮ ಜನ್ಮಭೂಮಿ ತೀರ್ಥಕ್ಷೇತ್ರ ಮಂದಿರ ನಿರ್ಮಾಣಕ್ಕೆ ಒಂದು ಲಕ್ಷದ ಒಂದು ಸಾವಿರದ ಒಂದು ರೂಪಾಯಿಗಳನ್ನು ದಾವಣಗೆರೆ ಪ್ರವಾಸಿ ಮಂದಿರದಲ್ಲಿ ಶಾಸಕ ಎಸ್.ಎ. ರವೀಂದ್ರನಾಥ್‌ ಅವರ ಸಮ್ಮುಖದಲ್ಲಿ ಆರ್‌.ಎಸ್‌.ಎಸ್. ಮುಖಂಡರಾದ ರಮೇಶ್ ಇವರಿಗೆ ನೀಡಿದರು.

ಈ ಸಂದರ್ಭದಲ್ಲಿ ಜಿ.ಪಂ.ಸದಸ್ಯರಾದ ಬಿ.ದುರ್ಗದ ಲಿಂಗರಾಜ್, ಅಜ್ಜಣ್ಣ, ಎಪಿಎಂಸಿ, ಯತಿನ್‌ಗೌಡ ಮತ್ತಿತರರು ಉಪಸ್ಥಿತರಿದ್ದರು.

error: Content is protected !!