ಕುರಿಗಳ್ಳರ ಬಂಧನ: 20 ಕುರಿಗಳ ವಶ

ದಾವಣಗೆರೆ, ಫೆ.7- ಮೂವರು ಕುರಿಗಳ್ಳರನ್ನು ಬಂಧಿಸಿರುವ ಹದಡಿ ಠಾಣೆ ಪೊಲೀಸರು, 20 ಕುರಿಗಳನ್ನು ವಶಪಡಿಸಿಕೊಂಡಿದ್ದಾರೆ.

ಶಿವಮೊಗ್ಗದ ಟಿಪ್ಪು ನಗರದ ಬಟ್ಟೆ ವ್ಯಾಪಾರಿಗ ಳೆನ್ನಲಾದ ಸೈಯದ್ ದಸ್ತಗೀರ್, ಅಮಾನುವುಲ್ಲಾ ಖಾನ್, ಹೊನ್ನಾಳಿ ತಾಲ್ಲೂಕಿನ ಕೂಲಂಬಿಯ ಹಮಾಲಿ ಮಹಮದ್ ಅಲ್ತಾಫ್ ಬಂಧಿತರು.  ಬಲ್ಲೂರು ಗ್ರಾಮದ ಬಕ್ಕೇಶ್ವರಯ್ಯ ಎಂಬುವರ ಗೋದಾಮಿನಲ್ಲಿ ಕಳೆದ ವಾರ 20 ಕುರಿಗಳು ಕಳ್ಳತನವಾಗಿ ದ್ದವು.  ಈ ಸಂಬಂಧ ಹದಡಿ ಪೊಲೀಸ್ ಠಾಣೆ ಯಲ್ಲಿ ಪ್ರಕರಣ ದಾಖಲಾಗಿತ್ತು.

ಎಸ್ಪಿ ಹನುಮಂತ ರಾಯ, ಎಎಸ್ಪಿ ಎಂ. ರಾಜೀವ್‌ ಹಾಗೂ ಗ್ರಾಮಾಂತರ ಡಿವೈಎಸ್ಪಿ ನರಸಿಂಹ ವಿ. ತಾಮ್ರಧ್ವಜ ನಿರ್ದೇಶನದಂತೆ ಗ್ರಾಮಾಂ ತರ ಸಿಪಿಐ ಬಿ. ಮಂಜುನಾಥ ಮಾರ್ಗದರ್ಶನದಲ್ಲಿ ಹದಡಿ ಠಾಣೆಯ ಪಿಎಸ್ ಐ ಪಿ. ಪ್ರಸಾದ್ ನೇತೃತ್ವದಲ್ಲಿ ಸಿಬ್ಬಂ ದಿಗಳಾದ ಕರಿಬಸಪ್ಪ, ಶಿವಕುಮಾರ್, ಮಂಜುನಾಥ, ವಿಶ್ವನಾಥ, ವೀರಭದ್ರಪ್ಪ, ಅಣ್ಣಪ್ಪ, ಸಿದ್ದೇಶ್, ಅಶೋಕ್, ಜಗದೀಶ್ ಒಳಗೊಂಡ ತಂಡವು ಆರೋಪಿಗಳನ್ನು ಬಂಧಿಸಿದೆ.

error: Content is protected !!