ದಾವಣಗೆರೆ, ಫೆ.7- ಅಯೋಧ್ಯೆಯ ರಾಮಮಂದಿರಕ್ಕೆ ನಿಧಿ ಸಂಗ್ರ ಹಣಾ ಅಭಿಯಾನವನ್ನು ನಗರದ ಎಂ.ಸಿ.ಸಿ. `ಬಿ’ ಬ್ಲಾಕ್ ನಲ್ಲಿ ನಡೆಸಲಾಯಿತು. ಈ ಸಂದರ್ಭದಲ್ಲಿ 38ನೇ ವಾರ್ಡಿನ ಹಿರಿಯ ನಾಗರಿಕರಾದ ಹೆಚ್.ಸಿ. ಶ್ರೀಕಂಠಣ್ಣ ಕುಟುಂಬದವರು ರಾಮಮಂದಿರ ನಿರ್ಮಾಣಕ್ಕೆ ನಿಧಿ ಸಮರ್ಪಿಸಿದರು. ಬಿಜೆಪಿ ಮುಖಂಡ ಶಿವಕುಮಾರ್ ಮಳಲ್ಕೆರೆ, ಬಿ.ಜಿ. ನಾಗರಾಜ್, ಕೆ.ಬಿ. ಮೋಹನ್ ರಾವ್, ಪ್ರಸಾದ್, ಸಿದ್ದಲಿಂಗಪ್ಪ, ಬಸವರಾಜಯ್ಯ, ಪ್ರಶಾಂತ್, ಅಶೋಕ್ ಮತ್ತಿತರರು ಉಪಸ್ಥಿತರಿದ್ದರು.
July 4, 2024