ಅಥಣಿ ಸ್ನಾತಕೋತ್ತರ ಕೇಂದ್ರದ ಮೂವರಿಗೆ ಚಿನ್ನದ ಪದಕ ಪ್ರದಾನ

ದಾವಣಗೆರೆ, ಏ.8- ನಗರದ ಅಥಣಿ ಸ್ನಾತಕೋತ್ತರ ಕೇಂದ್ರದ ವಿದ್ಯಾರ್ಥಿಗಳಾದ ಜಿ.ಆರ್. ಕಾವ್ಯ ಅವರು ಎಂ.ಕಾಂ.ನಲ್ಲಿ ಮೊದಲ ರ್ಯಾಂಕ್, ಕೆ.ಪಿ. ನಿಸರ್ಗ ಅವರು ಎಂ.ಎ. ಇಂಗ್ಲಿಷ್ ವಿಭಾಗದಲ್ಲಿ ಮೊದಲ ರ್ಯಾಂಕ್, ಎಸ್. ಉಷಾ ರಾಣಿ ಅಕೌಂಟಿಂಗ್ ಅಂಡ್ ಟ್ಯಾಕ್ಸೇಷನ್ ನಲ್ಲಿ ಅತ್ಯಧಿಕ ಅಂಕಗಳೊಂದಿಗೆ ಚಿನ್ನದ ಪದಕಗಳನ್ನು ಪಡೆದಿದ್ದು, ದಾವಣಗೆರೆ ವಿಶ್ವವಿದ್ಯಾನಿಲಯದಲ್ಲಿ ಗುರುವಾರ ನಡೆದ 8ನೇ ಘಟಿಕೋತ್ಸವದಲ್ಲಿ ದಾವಣಗೆರೆ ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ. ಎಸ್.ವಿ. ಹಲಸೆ ಅವರು ಮೂವರಿಗೂ ಪದಕಗಳನ್ನು ಪ್ರದಾನ ಮಾಡಿದರು.  

ಬೆಂಗಳೂರಿನ ಅಕಾಡೆಮಿ ಫಾರ್ ಕ್ರಿಯೇಟಿವ್ ಟೀಚಿಂಗ್ ಅಧ್ಯಕ್ಷ ಡಾ. ಗುರುರಾಜ ಕರ್ಜಗಿ, ದಾವಣಗೆರೆ ವಿವಿ ಕುಲ ಸಚಿವರುಗಳಾದ ಪ್ರೊ. ಗಾಯತ್ರಿ ದೇವರಾಜ್, ಪ್ರೊ. ಹೆಚ್.ಎಸ್. ಅನಿತಾ ಅವರುಗಳು ಉಪಸ್ಥಿತರಿದ್ದರು.

error: Content is protected !!