ರೋಗಿಗಳಿಗೆ ಹಣ್ಣು, ಬಿಸ್ಕತ್ತು ವಿತರಣೆ

ಹರಪನಹಳ್ಳಿ, ಏ.5- ಮಾಜಿ ಶಾಸಕರು ಹಾಗೂ ಯುವಕರ ಆಶಾಕಿರಣ ದಿ. ಎಂ.ಪಿ.ರವೀಂದ್ರ ಅವರ ಜನ್ಮ ದಿನಾಚರಣೆ ಪ್ರಯುಕ್ತ ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ರೋಗಿಗಳಿಗೆ ಹಣ್ಣು, ಬಿಸ್ಕತ್ತು ವಿತರಿಸಲಾಯಿತು. 

ಈ ಸಂದರ್ಭದಲ್ಲಿ ಶಂಕರಪ್ಪ, ತಾ.ಪಂ. ಸದಸ್ಯರಾದ ಶಿವರಾಜ್, ಪುರಸಭಾ ಮಾಜಿ ಸದಸ್ಯರಾದ ಸಂತೋಷ್, ಜೈನ್, ವಿಲ್ಸನ್ ಸ್ವಾಮಿ, ಕೋಡಿಹಳ್ಳಿ ಕೊಟ್ರೇಶ್, ಕರೆಯತ್ತಿನ ಕೊಟ್ರೇಶ್, ಬಾವಿಮನಿ ಕೊಟ್ರೇಶ್, ಪುನೀತ್ ದೊಡ್ಮನೆ, ಶಿವರಾಜ್ ಪಾಟೀಲ್, ಅಭಿಮಾನಿಗಳು ಉಪಸ್ಥಿತರಿದ್ದರು.

error: Content is protected !!