ಉಚಿತ ಕ್ರಿಕೆಟ್ ತರಬೇತಿ ಶಿಬಿರ

ಹರಪನಹಳ್ಳಿ : ಎಂ.ಪಿ.ರವೀಂದ್ರ ಜನ್ಮ ದಿನಾಚರಣೆ

ಹರಪನಹಳ್ಳಿ, ಏ.5- ಪಟ್ಟಣದ ಎಸ್.ಯು.ಜೆ.ಎಂ ಪಿಯು ಕಾಲೇಜಿನಲ್ಲಿ ಎಂ.ಪಿ.ಪ್ರಕಾಶ್ ಸಮಾಜ ಮುಖಿ ಟ್ರಸ್ಟ್‌ನ ಸಹಯೋಗದಲ್ಲಿ ಕೆಪಿಸಿಸಿ ಮಾಧ್ಯಮ ವಿಶ್ಲೇಷಕಿ ಎಂ.ಪಿ.ವೀಣಾ ಮಹಾಂತೇಶ್ ಚರಂತಿಮಠ ಅವರ ಸಹೋದರ ಹಾಗೂ ಹರಪನಹಳ್ಳಿಯ ಮಾಜಿ ಶಾಸಕ ದಿ. ಎಂ.ಪಿ.ರವೀಂದ್ರ ಅವರ 52ನೇ ವರ್ಷದ ಜನ್ಮ ದಿನಾಚರಣೆ ಅಂಗವಾಗಿ ಉಚಿತ ಕ್ರಿಕೆಟ್ ತರಬೇತಿ ಶಿಬಿರ ಆಯೋಜಿಸಲಾಗಿತ್ತು.

ಕೆಪಿಸಿಸಿ ಮಾಧ್ಯಮ ವಿಶ್ಲೇಷಕರಾದ ಎಂ.ಪಿ.ವೀಣಾ ಮಹಾಂತೇಶ್ ಚರಂತಿ ಮಠ ಮಾತನಾಡಿ, ನನ್ನ ಸಹೋದರ ಎಂ.ಪಿ.ರವೀಂದ್ರ ಅವರು ಶಾಸಕರಾಗಿದ್ದಾಗ ಕ್ಷೇತ್ರದಲ್ಲಿ ಮಾಡಿದ ಜನಪರ ಅಭಿವೃದ್ಧಿ ಕಾರ್ಯಗಳು ಚಿರಸ್ಥಾಯಿಯಾಗಿದ್ದು, ಇಂದಿಗೂ ಅವರು ಜನಮಾನಸದಲ್ಲಿ ಅಚ್ಚಳಿಯದೇ ಉಳಿದಿದ್ದಾರೆ ಎಂದ ಅವರು, ಯುವಕರಲ್ಲಿ ಕ್ರೀಡೆಗಳು ಆರೋಗ್ಯ ವೃದ್ಧಿಸುತ್ತವೆ. ಹಾಗಾಗಿ ಇರುವ ಸಮಯದಲ್ಲಿ ಕೆಲಸ ಸಮಯ ಕ್ರೀಡೆಗಳಿಗಾಗಿ ಮೀಸಲಿಡಬೇಕು ಎಂದರು.

ಪುರಸಭೆ ಮಾಜಿ ಅಧ್ಯಕ್ಷರಾದ ಕವಿತಾ ವಾಗೀಶ್, ಚಿಗಟೇರಿ ಬ್ಲಾಕ್ ಯುವ ಕಾಂಗ್ರೆಸ್ ಅಧ್ಯಕ್ಷ ಹೆಚ್.ಶಿವರಾಜ್, ಹರಪನಹಳ್ಳಿ ಬ್ಲಾಕ್ ಯುವ ಕಾಂಗ್ರೆಸ್ ಉಪಾಧ್ಯಕ್ಷ ಮಕ್ರಬ್ಬಿ ದಾದಾಪೀರ್, ಪಿ.ಮನೋಜ್ ಕುಮಾರ್, ಗಾಯತ್ರಮ್ಮ, ಕಡಬಗೆರೆ ನರೇಂದ್ರ, ಗುಡಿಹಳ್ಳಿ ಗೋಪಿ, ಚೇತನ್‌ಕುಮಾರ್ ಸೇರಿದಂತೆ ಮತ್ತಿತರರು ಶಿಬಿರದಲ್ಲಿ ಭಾಗವಹಿಸಿದ್ದರು.

error: Content is protected !!