ರಾಮ ಮಂದಿರ ನಿರ್ಮಾಣಕ್ಕೆ ಡಾ.ಶಹೀದ್‌ ನಿಧಿ ಸಮರ್ಪಣೆ

ದಾವಣಗೆರೆ,ಫೆ.2- ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ನಿರ್ಮಿಸುವ ಸಂಬಂಧ ನಡೆಸುತ್ತಿರುವ ನಿಧಿ ಸಮರ್ಪಣಾ ಅಭಿಯಾನದಲ್ಲಿ ಮಾಜಿ ಸಂಸದ  ದಿ. ಜಗಳೂರು ಇಮಾಂ ಸಾಬ್‌ ಅವರ ಮೊಮ್ಮಗ ಡಾ.ಶಹೀದ್‌ ಅವರು ನಿಧಿ ಸಮರ್ಪಿಸಿದರು. ವಿಧಾನ ಪರಿಷತ್ತಿನ ಮಾಜಿ ಮುಖ್ಯ ಸಚೇತಕ ಡಾ. ಎ.ಹೆಚ್. ಶಿವಯೋಗಿಸ್ವಾಮಿ, ಸೋಮೇಶ್ವರ ವಿದ್ಯಾ ಲಯದ ಕಾರ್ಯದರ್ಶಿ ಕೆ.ಎಂ. ಸುರೇಶ್ ಮತ್ತಿತರರು ಉಪಸ್ಥಿತರಿದ್ದರು.

error: Content is protected !!