2ಎ ಮೀಸಲಾತಿ ನೀಡುವಂತೆ ಒತ್ತಾಯಿಸಿ ಕೂಡಲ ಸಂಗಮದ ಪಂಚಮಸಾಲಿ ಪೀಠದ ಜಗದ್ಗುರು ಶ್ರೀ ಬಸವ ಜಯ ಮೃತ್ಯುಂಜಯ ಸ್ವಾಮೀಜಿ ಮತ್ತು ಹರಿಹರದ ಪಂಚಮಸಾಲಿ ಪೀಠದ ಜಗದ್ಗುರು ಶ್ರೀ ವಚನಾನಂದ ಸ್ವಾಮೀಜಿ ಶನಿವಾರ ಸಂಜೆ ದಾವಣಗೆರೆ ಪ್ರವೇಶಿಸಿದ ಸಂದರ್ಭದಲ್ಲಿ ಸಾಧು ಲಿಂಗಾಯತ ಸಮಾಜದ ಯುವ ಮುಖಂಡರಾದ ಶಶಿಧರ ಹೆಮ್ಮನಬೇತೂರು ಅವರು ಉಭಯ ಶ್ರೀಗಳಿಗೆ ಪುಷ್ಪಮಾಲೆಯೊಂದಿಗೆ ಎಳನೀರು ನೀಡುವುದರ ಮೂಲಕ ಸ್ವಾಗತಿಸಿದರು.ಸತೀಶ್ ಸಿರಿಗೆರೆ, ಕುಮಾರ್ ಮೆಳ್ಳೇಕಟ್ಟೆ, ಕೊರಟಿಗೆರೆ ಶಿವಕುಮಾರ್, ಪ್ರಭು ಕಾವಲಹಳ್ಳಿ, ಸಂತೋಷ್ ಸಿರಿಗೆರೆ ಮತ್ತಿತರರು ಶ್ರೀಗಳನ್ನು ಬರ ಮಾಡಿಕೊಂಡರು.
July 23, 2024