ಡಾ. ಕೃಷ್ಣ ನವಲೆ ಅವರಿಗೆ `ಭಾವಸಾರ ಕೊರೊನಾ ವಾರಿಯರ್’ ಪ್ರಶಸ್ತಿ

ದಾವಣಗೆರೆ, ಜ.24- ಕೋವಿಡ್ 19 ಸಂದರ್ಭದಲ್ಲಿ ವಾರಿಯರ್ ಆಗಿ ಸೇವೆ ಸಲ್ಲಿಸಿದ ನಗರದ ಡಾ. ಎನ್.ಹೆಚ್. ಕೃಷ್ಣ ನವಲೆ ಅವರನ್ನು ಅಖಿಲ ಭಾರತ ಭಾವಸಾರ ಕ್ಷತ್ರಿಯ ಮಹಾಸಭಾದಿಂದ `ಭಾವಸಾರ ಕೊರೊನಾ ವಾರಿಯರ್’ ಪ್ರಶಸ್ತಿ ನೀಡುವುದರೊಂದಿಗೆ ಗೌರವಿಸಲಾಯಿತು. 

ಡಾ. ಕೃಷ್ಣ ಅವರು ವೈದ್ಯಕೀಯ ಕ್ಷೇತ್ರದಲ್ಲಿ ಸಲ್ಲಿಸುತ್ತಿರುವ ಅತ್ಯುತ್ತಮ ಸೇವೆಯನ್ನು ಪರಿಗಣಿಸಿ ಪ್ರಶಸ್ತಿ ನೀಡಲಾಗಿದೆ ಎಂದು ಮಹಾಸಭಾದ ಪ್ರಕಟಣೆ ತಿಳಿಸಿದೆ. 

ಎಐಬಿಕೆಎಂ ಜುಬೊಕ್ ಉಪಾಧ್ಯಕ್ಷ ಟಿ.ಆರ್. ಮಿರಜ್‌ಕರ್‌, ಯುವ ಪರಿಷತ್ ಅಧ್ಯಕ್ಷ ಮಹಾವೀರ್ ಗಂಟೆ, ಹಾವೇರಿ ಜಿಲ್ಲಾಧ್ಯಕ್ಷ ಅರುಣ್‌ಕುಮಾರ್ ಜಿ.ಕುಂಟೆ, ಹಾವೇರಿಯ ಬಿವಿಐ ಅಧ್ಯಕ್ಷ ಸಂತೋಷ್ ಮಿರಜ್‌ಕರ್‌, ಎಐಬಿಕೆಎಂ ಯುವ ಪರಿಷತ್ ವಿಭಾಗದ ಕಾರ್ಯದರ್ಶಿ ಪ್ರಕಾಶ್ ಹೆಬ್ಬಾರೆ ಮತ್ತಿತರರು ಡಾ. ಕೃಷ್ಣ ಅವರ ನಿವಾಸಕ್ಕೆ ಭೇಟಿ ನೀಡಿ, ಪ್ರಶಸ್ತಿ ಪ್ರದಾನ ಮಾಡಿದರು.

error: Content is protected !!