ಶ್ರೀರಾಮ ಮಂದಿರ : ಬಿ.ಎಸ್. ಚನ್ನಬಸಪ್ಪ ಅಂಡ್ ಸನ್ಸ್‍ನಿಂದ 5 ಲಕ್ಷ ರೂ. ದೇಣಿಗೆ

ದಾವಣಗೆರೆ ಜ.20 – ಬಿ ಎಸ್ ಚನ್ನಬಸಪ್ಪ ಅಂಡ್ ಸನ್ಸ್ ಸಂಸ್ಥೆಯಿಂದ ಜವಳಿ ಉದ್ಯಮಿ ಬಿ.ಸಿ.ಉಮಾಪತಿ ಅವರು ಶ್ರೀರಾಮ ಮಂದಿರ ನಿರ್ಮಾಣಕ್ಕಾಗಿ 5 ಲಕ್ಷ ರೂ. ದೇಣಿಗೆ ನೀಡಿದರು. ಈ ಸಂದರ್ಭದಲ್ಲಿ ಬಿ.ಯು. ಚಂದ್ರಶೇಖರ್, ಸಂಘಚಾಲಕರಾದ ಜಿ.ಉಮಾಪತಿ, ಸಂಸದ ಜಿ.ಎಂ.ಸಿದ್ದೇಶ್ವರ, ಸಂಘದ ಪ್ರಮುಖರಾದ ರುದ್ರಯ್ಯ, ರಮೇಶ್, ಬಿಜೆಪಿ ಮುಖಂಡ ಯಶವಂತ್ ರಾವ್, ಪಾಲಿಕೆ ಸದಸ್ಯ ಎಸ್.ಟಿ.ವೀರೇಶ್, ಸಂಘದ ಕಾರ್ಯಕರ್ತ ಬಸವರಾಜ್ ಉಚ್ಚಂಗಿದುರ್ಗ ಮತ್ತಿತರರು ಉಪಸ್ಥಿತರಿದ್ದರು.

error: Content is protected !!