ಯಲ್ಲಮ್ಮ ನಗರದಲ್ಲಿ ಹೈಮಾಸ್ಟ್ ದೀಪ ಉದ್ಘಾಟನೆ

ದಾವಣಗೆರೆ,ಜ.20- ನಗರ ಪಾಲಿಕೆಯ 22ನೇ ವಾರ್ಡಿನ ಯಲ್ಲಮ್ಮ ನಗರದಲ್ಲಿ ಅಳವಡಿಸಿರುವ ಹೈಮಾಸ್ಟ್ ದೀಪವನ್ನು ಈ ವಾರ್ಡಿನ ಪಾಲಿಕೆ ಸದಸ್ಯ ದೇವರಮನೆ ಶಿವಕುಮಾರ್ ಅವರು ಸ್ವಿಚ್ ಒತ್ತುವುದರ ಮೂಲಕ ಉದ್ಘಾಟಿಸಿದರು. ಪಾಲಿಕೆಯ ಅಭಿಯಂತರ ಸಂದೀಪ್, ವಾರ್ಡಿನ ಶ್ರೀ ಆಂಜ ನೇಯ ದೇವಸ್ಥಾನದ ಅಧ್ಯಕ್ಷ ಹೇಮಣ್ಣ,  ವಾರ್ಡಿನ ಪ್ರಮುಖರುಗಳಾದ   ತರಕಾರಿ ಮೂರ್ತಿ, ರುದ್ರಸ್ವಾಮಿ, ಪ್ರಸನ್ನ ಜಾಧವ್, ಗಣೇಶ ಪಿಸಾಳೆ, ನಾಗರಾಜ್ ಗೌಡ, ರವಿಸ್ವಾಮಿ ಮತ್ತಿತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

error: Content is protected !!