ದಾವಣಗೆೆರೆ, ಜ.18- ನಗರ ಪಾಲಿಕೆಯ 22ನೇ ವಾರ್ಡಿನ ಯಲ್ಲಮ್ಮ ನಗರದ 3ನೇ ಮುಖ್ಯ ರಸ್ತೆ, 13ನೇ ತಿರುವಿನಲ್ಲಿ ನಗರ ಪಾಲಿಕೆಯ 15ನೇ ಹಣಕಾಸಿನ ಯೋಜನೆಯಡಿಯಲ್ಲಿ ಸುಮಾರು 30 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಲುದ್ದೇಶಿಸಿರುವ ಸಿಮೆಂಟ್ ರಸ್ತೆ ಮತ್ತು ಒಳಚರಂಡಿ ಕಾಮಗಾರಿಗಳಿಗೆ ಈ ವಾರ್ಡಿನ ಪಾಲಿಕೆ ಸದಸ್ಯ ದೇವರಮನೆ ಶಿವಕುಮಾರ್ ಅವರು ಗುದ್ದಲಿ ಪೂಜೆ ನೆರವೇರಿಸುವುದರ ಮೂಲಕ ಚಾಲನೆ ನೀಡಿದರು.
ಪಾಲಿಕೆಯ ಅಭಿಯಂತರರಾದ ಶೃತಿ ಮತ್ತು ಜಯಲಕ್ಷ್ಮಿ, ವಾರ್ಡಿನ ಪ್ರಮುಖರುಗಳಾದ ಗಣೇಶಪ್ಪ, ಚಲುವಪ್ಪ, ಲಕ್ಷ್ಮಣರಾವ್ ಸಾಳಂಕಿ, ನಾಗರಾಜ ಗೌಡ, ತರಕಾರಿ ಮೂರ್ತಿ, ರುದ್ರಸ್ವಾಮಿ, ಶ್ರೀನಿವಾಸ್, ಮೀಸೆ ರಾಮಣ್ಣ, ಅಣ್ಣೇಶ್ ಮತ್ತಿತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.