ಅಪಘಾತದಲ್ಲಿ ಮಡಿದ ಮಹಿಳೆಯರಿಗೆ ಸ್ನೇಹಿತೆಯರ ಕಂಬನಿ

ದಾವಣಗೆರೆ,ಜ.16- ಧಾರವಾಡದ ಬಳಿ ನಿನ್ನೆ ನಡೆದ ಭೀಕರ ರಸ್ತೆ ಅಪಘಾತದಲ್ಲಿ ದುರ್ಮರಣಕ್ಕೀಡಾದ ನಗರದ 9 ಜನ ಬಾಲ್ಯ ಸ್ನೇಹಿತೆಯರಿಗೆ ವಿವಿಧ ಸಂಘ ಟನೆಗಳು ಮತ್ತು ಮೃತರ ಆಪ್ತರು ಎಲ್ಲರೂ ಒಟ್ಟಾಗಿ ಸೇರಿ ಇಂದು ಸಂಜೆ ಭಾವಪೂರ್ಣ ಶೋಕಾಚರಣೆ ನಡೆಸಿದರು.

ಡಾ. ಎಂ.ಸಿ. ಮೋದಿ ವೃತ್ತದಲ್ಲಿ ಏರ್ಪಡಿಸಿದ್ದ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಎಲ್ಲಾ 9 ಜನ ಮೃತ ಮಹಿಳೆಯರ ಭಾವಚಿತ್ರಗಳಿಗೆ ಕ್ಯಾಂಡಲ್ ಹಚ್ಚುವುದರ ಮೂಲಕ ಕಂಬನಿ ಮಿಡಿಯಲಾಯಿತು.

ಸೀಮಾ ಮತ್ತು ತಂಡ, ರಮಿತ ಮತ್ತು ತಂಡ, ಚೈತ್ರ ಮತ್ತು ತಂಡ, ಆಶಾ ಮತ್ತು ತಂಡಗಳಲ್ಲದೇ, ವಿವಿಧ ಸಂಘಟನೆಗಳ ಪದಾಧಿಕಾರಿಗಳು ಈ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದರು. 

ನಗರ ಪಾಲಿಕೆ ಸದಸ್ಯ ಗಡಿಗುಡಾಳ್ ಮಂಜು ನಾಥ್, ನಗರ ಪಾಲಿಕೆ ನಾಮನಿರ್ದೇಶಿತ ಸದಸ್ಯರು ಗಳಾದ ಕು. ಹೆಚ್.ಸಿ. ಜಯಮ್ಮ, ಶಿವನಗೌಡ ಪಾಟೀಲ್, ಮುಖಂಡ ಯುವರಾಜ್ ಮಾಗಾನಹಳ್ಳಿ ಮತ್ತಿತರರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

error: Content is protected !!