ಕ್ರೀಡಾಪಟುಗಳಿಗೆ ಹುರಿದುಂಬಿಸಿದ ಎಸ್ಸೆಸ್ಸೆಂ

ದಾವಣಗೆರೆ, ಜ.14- ನಗರದ ಮಯೂರ ಕ್ರಿಕೆಟ್ ಕ್ಲಬ್ ವತಿಯಿಂದ ಸಂಕ್ರಾಂತಿ ಹಬ್ಬದ ಪ್ರಯುಕ್ತ ಹಮ್ಮಿಕೊಂಡಿರುವ ಆರು ದಿನಗಳ ಆಹ್ವಾನಿತ ಅಂತರ್ ಜಿಲ್ಲಾಮಟ್ಟದ ಹದಿನಾರು ವರ್ಷದೊಳಗಿನ ಬಾಲಕರ ಲೆದರ್‍ಬಾಲ್ ಕ್ರಿಕೆಟ್ ಟೂರ್ನಿಯಲ್ಲಿ ಮಾಜಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್ ಅವರು ಭಾಗವಹಿಸುವ ಮೂಲಕ ಕ್ರೀಡಾಪಟುಗಳನ್ನು ಹುರಿದುಂಬಿಸಿದರು.

ಭಾಗವಹಿಸಿರುವ ಆಹ್ವಾನಿತ ಕ್ರಿಕೆಟ್ ತಂಡಗಳನ್ನು ಆಯೋಜಕರು ಪರಿಚಯಿಸಿ, ನಗರದಲ್ಲಿ ಲೆದರ್ ಬಾಲ್ ಕ್ರಿಕೆಟ್ ಮೈದಾನವನ್ನು ನಿರ್ಮಿಸಿಕೊಟ್ಟಿರುವುದಕ್ಕೆ ಕೃತಜ್ಞತೆ ಸಲ್ಲಿಸಿದರು. ಮಲ್ಲಿಕಾರ್ಜುನ್ ಅವರು ಬ್ಯಾಟ್ ಮಾಡಿ, ಕ್ರೀಡಾಪಟುಗಳಿಗೆ ಶುಭ ಹಾರೈಸಿದರು.

ಈ ಸಂದರ್ಭದಲ್ಲಿ ಕ್ರೀಡಾಪಟುಗಳ ಸಂಘದ ಅಧ್ಯಕ್ಷ ದಿನೇಶ್ ಕೆ.ಶೆಟ್ಟಿ,  ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹೆಚ್.ಬಿ.ಮಂಜಪ್ಪ, ಕೆಪಿಸಿಸಿ ವಕ್ತಾರ ಡಿ.ಬಸವರಾಜ್, ಶಾಮನೂರು ಟಿ.ಬಸವರಾಜ್, ಪಾಲಿಕೆ ವಿಪಕ್ಷ ನಾಯಕ ಎ.ನಾಗರಾಜ್, ಸದಸ್ಯರುಗಳಾದ ದೇವರಮನೆ ಶಿವಕುಮಾರ್, ಅಬ್ದುಲ್ ಲತೀಫ್, ಕೆ.ಚಮನ್ ಸಾಬ್, ಜಿ.ಡಿ.ಪ್ರಕಾಶ್, ಅಯೂಬ್ ಪೈಲ್ವಾನ್, ಎಲ್.ಎಂ.ಪ್ರಕಾಶ್, ತುಮಕೂರು ಲೋಕೇಶ್, ಕೆ.ಶಶಿಧರ್, ಅಶೋಕ್, ಕೆ.ಎಸ್.ಸಿ.ಎ. ವಕ್ತಾರರಾದ ಮೋಹನ್‍ರಾ ವ್, ಅನಿಲ್, ರೈತ ಸಂಘದ ರಾಜ್ಯಾಧ್ಯಕ್ಷ ಹುಚ್ಚವ್ವನಹಳ್ಳಿ ಮಂಜುನಾಥ್, ಕರಿಬಸಪ್ಪ, ತಿಮ್ಮೇಶ್, ಸಿರಿಗೆರೆ ಉಮೇಶ್, ರಂಗನಾಥ್, ಸಂತೋಷ್ ಕುಮಾರ್, ಎಲ್.ಬಿ.ಭೈರೇಶ್, ಅನಿತಾಬಾಯಿ ಮಾಲತೇಶ್, ಸುಷ್ಮಾ ಪಾಟೀಲ್ ಇತರರು ಹಾಜರಿದ್ದರು.

error: Content is protected !!