ನಂದಿ ಸೌಹಾರ್ದ ಸಹಕಾರಿ ಅಧ್ಯಕ್ಷರಾಗಿ ಹಳ್ಳಿಹಾಳ್ ವೀರನಗೌಡ

ಮಲೇಬೆನ್ನೂರು, ಜ.15- ಇಲ್ಲಿನ ಪ್ರತಿಷ್ಠಿತ ಶ್ರೀ ನಂದಿ ಸೌಹಾರ್ದ ಸಹಕಾರಿ ನಿಯಮಿತದ ನೂತನ ಅಧ್ಯಕ್ಷರಾಗಿ ಹಳ್ಳಿಹಾಳ್ ಹೆಚ್.ವೀರನಗೌಡ ಮತ್ತು ಉಪಾಧ್ಯಕ್ಷರಾಗಿ ಜಿ.ಬೇವಿನಹಳ್ಳಿಯ ಶ್ರೀಮತಿ ಶೋಭಾ ಬಿ.ಜಿ.ಪಾಲಾಕ್ಷಪ್ಪ ಅವರು ಶುಕ್ರವಾರ ನಡೆದ ಚುನಾವಣೆಯಲ್ಲಿ ಆಯ್ಕೆಯಾಗಿದ್ದಾರೆ. 

ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ಹೆಚ್.ವೀರನಗೌಡ ಅವರು, 9 ಮತಗಳನ್ನು ಪಡೆದು ಆಯ್ಕೆಯಾದರೆ, ಪ್ರತಿ ಸ್ಪರ್ಧಿ ಹಳ್ಳಿಹಾಳ್ ದ ಹೆಚ್.ಟಿ.ಶಾಂತನಗೌಡ ಅವರು 6 ಮತಗಳಿಂದ ಪರಾಭವಗೊಂಡರು.

ಉಪಾಧ್ಯಕ್ಷ ಸ್ಥಾನಕ್ಕೆ ಶೋಭಾ ಅವರನ್ನು ಬಿಟ್ಟು ಬೇರೆ ಯಾರು ನಾಮ ಪತ್ರ ಸಲ್ಲಿಸದ ಕಾರಣ ಅವರು, ಅವಿರೋಧವಾಗಿ ಆಯ್ಕೆಯಾದರು.

ಹೆಚ್.ವೀರನಗೌಡ ಅವರ ನಾಮಪತ್ರಕ್ಕೆ ಹಿರಿಯ ನಿರ್ದೇಶಕ ಜಿಗಳಿ ಇಂದೂಧರ್ ಸೂಚಕರಾದರೆ, ನಿರ್ದೇಶಕ ಎ.ಆರೀಫ್ ಅಲಿ ಅನುಮೋದಕರಾಗಿದ್ದರು.

ಹೆಚ್.ಟಿ.ಶಾಂತನಗೌಡ ಅವರ ನಾಮಪತ್ರಕ್ಕೆ ನಿರ್ದೇಶಕ ಎ.ಕೆ.ತಿಪ್ಪೇಶಪ್ಪ ಸೂಚಕರಾದರೆ, ನಿರ್ದೇಶಕ ಎಂ.ವಿ.ನಾಗರಾಜ್ ಅನುಮೋದಕರಾಗಿದ್ದರು.

ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ಇಬ್ಬರು ಆಡಳಿತ ಮಂಡಳಿಯ ನಿರ್ದೇಶಕರ ಚುನಾವಣೆಯಲ್ಲಿ ಒಂದೇ ಗುಂಪಿನಿಂದ ಸ್ಪರ್ಧಿಸಿ ಗೆದ್ದಿದ್ದರು.

ನಿರ್ದೇಶಕರಾದ ಜಿಗಳಿಯ ಗೌಡ್ರ ಬಸವರಾಜಪ್ಪ, ಹಳ್ಳಿಹಾಳ ಹೆಚ್.ಟಿ.ಪರಮೇಶ್ವರಪ್ಪ, ಕೊಕ್ಕನೂರಿನ ಕೆ.ಹೆಚ್. ಆಂಜನೇಯ ಪಾಟೀಲ್, ಬಿ.ಹೆಚ್.ರವಿ, ಟಿ.ರಾಮಚಂದ್ರಪ್ಪ, ಆರ್.ನಾಗರಾಜ್, ಬೇವಿನಹಳ್ಳಿಯ ಸಂತೋಷ್ ಪಾಳೇದ, ಶ್ರೀಮತಿ ಭಾಗ್ಯ ಉದಯಗೌಡ ಅವರು ಅಧ್ಯಕ್ಷ-ಉಪಾಧ್ಯಕ್ಷರ ಆಯ್ಕೆ ಭಾಗವಹಿಸಿದ್ದರು. ಲೆಕ್ಕ ಪರಿಶೋಧನಾ ಇಲಾಖೆಯ ಹಿರಿಯ ಲೆಕ್ಕ ಪರಿಶೋಧಕ ಓ.ಮಂಜುನಾಥ್ ಸ್ವಾಮಿ ಚುನಾವಣಾಧಿಕಾರಿಯಾಗಿದ್ದರು.

error: Content is protected !!