ಹರಪನಹಳ್ಳಿಯಲ್ಲಿ ಶ್ರೀ ದತ್ತಾತ್ರೇಯ ಜಯಂತೋತ್ಸವದ ಸರಳ ಆಚರಣೆ

ಹರಪನಹಳ್ಳಿ, ಜ.8 – ಪಟ್ಟಣದ ಶಂಕಮಠದಲ್ಲಿ ಶ್ರೀ ದತ್ತಾತ್ರೇಯ ಜಯಂತ್ಯೋತ್ಸವವನ್ನು ಕೊರೊನಾ ಭೀತಿಯಿಂದ ಸರಳವಾಗಿ ಆಚರಣೆ ಮಾಡಲಾಯಿತು. 

ರಥೋತ್ಸವ ಇಲ್ಲದೇ ವೇದ ಮಂತ್ರಗಳ ಪಠಣ, ಪಲ್ಲಕ್ಕಿ ಉತ್ಸವ, ರುದ್ರಾಭಿಷೇಕಗಳೊಂದಿಗೆ ಜಯಂತಿಯನ್ನು ಆಚರಿಸಲಾಯಿತು. ಸಂಜೆ ವೇಳೆ ಅಷ್ಟಾವಧಾನ ಆರ್ಯಾಂಬಾ ಭಜನಾ ಮಂಡಳಿಯಿಂದ ಭಜನೆ. ನಂದಿಬೇವೂರು ಶ್ರೀಧರ ಶಾಸ್ತ್ರಿಗಳ ಮನೆಯವರಿಂದ ಪ್ರಸಾದ ವಿತರಣೆ ನಡೆಯಿತು 

ಕಡಬಗೇರಿಯ ಗೀತಾ ರಘುನಾಥ ಅವರು ಬೆಳ್ಳಿ ಪಂಚಾರತಿಯನ್ನು ಶಂಕರ ಮಠಕ್ಕೆ ಅರ್ಪಿಸಿದರು. ಸಕಲ ಭಕ್ತರಿಗೆ ತ್ರಿಮೂರ್ತಿ ರೂಪ ಶ್ರೀ ದತ್ತಾತ್ರೇಯ ಮುಕ್ತ ಆರೋಗ್ಯ ದಯಪಾಲಿಸಲಿ ಎಂದು ಶ್ರೀದತ್ತ ಸೇವಾ ಸಮಿತಿಯವರು ಪ್ರಾರ್ಥಿಸಿದರು.

error: Content is protected !!