ಕೂಡ್ಲಿಗಿ : ದೆಹಲಿ ಪ್ರತಿಭಟನೆ ಬೆಂಬಲಿಸಿ ರೈತರ ಮನವಿ

ಕೂಡ್ಲಿಗಿ, ಜ.8 – ದೆಹಲಿಯಲ್ಲಿ ರೈತರಿಗೆ ಮಾರಕವಾಗುವ ಕಾನೂನುಗಳನ್ನು ವಾಪಸ್ಸು ಪಡೆಯುವಂತೆ ಒತ್ತಾಯಿಸಿ 45 ದಿನಗಳಿಂದ ಮಾಡುತ್ತಿರುವ ಹೋರಾಟಕ್ಕೆ ಕೂಡ್ಲಿಗಿಯ  ಪ್ರಾಂತ್ಯ ರೈತ ಸಂಘ ಹಾಗೂ ಸೆಂಟರ್ ಆಫ್‌ ಟ್ರೇಡ್ ಯೂನಿಯನ್ ಬೆಂಬಲಿಸಿ ಶುಕ್ರವಾರ ತಹಶೀಲ್ದಾರ್ ಕಚೇರಿಗೆ ತೆರಳಿ ಮನವಿ ಪತ್ರ ಸಲ್ಲಿಸಿತು. 

ಈ ಸಂದರ್ಭದಲ್ಲಿ ರೈತ ಮುಖಂಡ ಗುನ್ನಳ್ಳಿ ರಾಘವೇಂದ್ರ, ಸಿ.ಐ.ಟಿ.ಯು ಮುಖಂಡ ಸಿ.ವಿರುಪಾಕ್ಷಿ ಮಾತನಾಡಿದರು. 

ಈ ಸಂದರ್ಭದಲ್ಲಿ ಕೆ.ಮಾಲಿಂಗ, ಬಿ.ರಫಿ, ಮಹದೇವಪ್ಪ, ಹಂಪಣ್ಣ, ಬಿ.ಮರುಳಸಿದ್ದಚಾರಿ ಮತ್ತಿತರರು ಹಾಜರಿದ್ದರು. 

error: Content is protected !!