ರಂಭಾಪುರಿ ಶ್ರೀಗಳ ಹುಟ್ಟುಹಬ್ಬ: ವೃದ್ಧರಿಗೆ ಹಣ್ಣು, ಸಿಹಿ ವಿತರಣೆ

ದಾವಣಗೆರೆ,ಜ.7- ಜಿಲ್ಲಾ ವೀರಶೈವ ಸದ್ಭೋದನಾ ಸಮಿತಿ ವತಿಯಿಂದ ಬಾಳೆಹೊನ್ನೂರಿನ ಶ್ರೀ ರಂಭಾಪುರಿ ಪೀಠದ ಜಗದ್ಗುರುಗಳವರ 65ನೇ ವರ್ಷದ ಹುಟ್ಟುಹಬ್ಬದ ಅಂಗವಾಗಿ ನಗರದ ವನಿತಾ ಸಮಾಜದ ಹಿರಿಯ ವನಿತೆಯರ ಧಾಮದಲ್ಲಿನ ವೃದ್ಧರಿಗೆ ಹಣ್ಣು – ಹಂಪಲು, ಸಿಹಿಯನ್ನು ವಿತರಿಸಲಾಯಿತು. 

ಜಿಲ್ಲಾ ವೀರಶೈವ ಸದ್ಭೋದನಾ ಸಮಿತಿ ಅಧ್ಯಕ್ಷರೂ ಆಗಿರುವ ನಗರ ಪಾಲಿಕೆ ಸದಸ್ಯ ದೇವರಮನೆ ಶಿವಕುಮಾರ್ ನೇತೃತ್ವದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಇಟ್ಟಿಗುಡಿ ಮಹಾದೇವಪ್ಪ, ದೇವರಮನೆ ಶಿವರಾಜ್, ಬಸವರಾಜ್, ಶಿವಯ್ಯ, ರುದ್ರೇಶ್, ಶ್ರೀಕಂಠಯ್ಯ ಮತ್ತಿತರರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

error: Content is protected !!