ದಿನೇಶ್ ಕೆ.ಶೆಟ್ಟಿ ಜನ್ಮ ದಿನ : ಸೇವಾ ಕಾರ್ಯಕ್ರಮ

ದಾವಣಗೆರೆ, ಮಾ. 17- ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ದಿನೇಶ್ ಕೆ. ಶೆಟ್ಟಿ ಅವರ ಹುಟ್ಟುಹಬ್ಬದ  ಅಂಗವಾಗಿ ದಿನೇಶ್ ಕೆ. ಶೆಟ್ಟಿ ಅಭಿಮಾನಿ ಬಳಗದಿಂದ ವಿವಿಧ ಸಾಮಾಜಿಕ ಸೇವಾ ಕಾರ್ಯಕ್ರಮಗಳನ್ನು ನಡೆಸಲಾಯಿತು.

ಪಿ.ಜೆ. ಬಡಾವಣೆ 5 ನೇ ಕ್ರಾಸ್‌ನಲ್ಲಿ ಸಿದ್ದಗಂಗಾಶ್ರೀ ಸ್ವಯಂ ಪ್ರೇರಿತ ರಕ್ತ ಕೇಂದ್ರ ಮತ್ತು ವಿಭಜನಾ ಘಟಕದ ಸಹಯೋಗ ದೊಂದಿಗೆ ರಕ್ತದಾನ ಶಿಬಿರ ಉದ್ಘಾಟನೆ ಮಾಡಿದರು. ಶ್ರೀ ಓಂಕಾರ ಹುಚ್ಚನಾಲಿಂಗಸ್ವಾಮಿ ಅನಾಥ ಸೇವಾಶ್ರಮದ ಮಕ್ಕಳಿಗೆ ಅನ್ನ ಸಂತರ್ಪಣೆ ಏರ್ಪಡಿಸಲಾಗಿತ್ತು.

ವನಿತಾ ಸಮಾಜದ ವೃದ್ಧಾಶ್ರಮದ ಹಿರಿಯರಿಗೆ ಹಣ್ಣು – ಹಂಪಲು ವಿತರಿಸಲಾಯಿತು. ಹಿರಿಯ ವನಿತೆಯರಿಗೆ ಊಟದ ವ್ಯವಸ್ಥೆ ಮಾಡಲಾಗಿತ್ತು.

ಅಲ್ಲದೇ, ವಿಕಲಚೇತನರಿಗೆ ವ್ಹೀಲ್‌ ಚೇರ್ ವಿತರಣೆ ಮಾಡಲಾಯಿತು. ಪಾಲಿಕೆಯ ಮಾಜಿ ವಿರೋಧ ಪಕ್ಷದ ನಾಯಕರಾದ ಎ. ನಾಗ ರಾಜ್,  ಎನ್. ಜಿ. ಪುಟ್ಟಸ್ವಾಮಿ, ಎಸ್. ಮಲ್ಲಿಕಾ ರ್ಜುನ್, ಬುನಿಯನ್ ಭಾಸ್ಕರ್, ವಾರ್ಡ್ ಮುಖಂಡ ರಾದ ಪಂಚಪ್ಪ ತೆರದಾಳ್, ಪರಸಪ್ಪ, ಮಧು ಪವಾರ್ ಮತ್ತು ಇತರರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

error: Content is protected !!