ಪುನೀತ್ ರಾಜ್‌ಕುಮಾರ್ ಜನ್ಮದಿನ : ಅನ್ನ ಸಂತರ್ಪಣೆ

ಹರಪನಹಳ್ಳಿ, ಮಾ. 17- ಪಟ್ಟಣದ ಸುಣಗಾರಗೇರಿಯ ಗಂಗಾ ಪರಮೇಶ್ವರಿ ದೇವಸ್ಥಾನದ ಆವರಣದಲ್ಲಿ ಶಶಿಧರ್ ಪೂಜಾರ್ ಅಭಿಮಾನಿ ಬಳಗದ ವತಿಯಿಂದ ಕರ್ನಾಟಕ ರತ್ನ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಹುಟ್ಟು ಹಬ್ಬದ ಪ್ರಯುಕ್ತ ಅನ್ನ ಸಂತರ್ಪಣೆ ನಡೆಯಿತು.

 ಈ ವೇಳೆ ಜಿಲ್ಲಾ ಟಾಸ್ಕ್ ಪೋರ್ಸ್ ಸಮಿತಿ ಸದಸ್ಯ ಶಶಿಧರ್ ಪೂಜಾರ್, ಪುರಸಭೆ ಸದಸ್ಯ ಲಾಟಿ ದಾದಾಪೀರ್, ವಿ.ಎಸ್.ಎಸ್.ಎನ್ ಅಧ್ಯಕ್ಷ ಟಿ.ಎಚ್.ಎಂ. ಮಂಜುನಾಥ, ಮುಖಂಡರುಗಳಾದ  ಫಕ್ಕೀರಪ್ಪ, ಜಲಗಾರ ಕೊಟ್ರೇಶ್, ಹನುಮಂತಪ್ಪ, ರಿಯಾಜ್ ಅಹಮದ್, ಲಾಟಿ ಸಲೀಂ ಸೇರಿದಂತೆ ಇತರರು ಇದ್ದರು.

ಪಟ್ಟಣದ ಬಾಪೂಜಿ ನಗರದಲ್ಲಿ ಅಪ್ಪು ಅಭಿಮಾನಿ ಬಳಗ ಹಾಗೂ ದಲಿತ ಸಂಘರ್ಷ ಸಮಿತಿ ವತಿಯಿಂದ  ಪುನೀತ್ ಅವರ ಹುಟ್ಟು ಹಬ್ಬವನ್ನು ಕೇಕ್ ಕತ್ತರಿಸಿ ಅದ್ಧೂರಿಯಾಗಿ ಆಚರಿಸಲಾಯಿತು.

ಬೃಹತ್ ಅಪ್ಪು ಕಟೌಟ್ ಗೆ ಹೂವಿನ ಸುರಿಮಳೆಗೈದು, ಕೇಕ್ ಕತ್ತರಿಸಿ  ಹುಟ್ಟು ಹಬ್ಬಕ್ಕೆ ಶುಭ ಕೋರಿ ಅಪ್ಪು ಅಮರ್ ಹೈ ಎಂದು ಘೋಷಣೆ ಕೂಗಿದರು.

ನಂತರ  ಸಾರ್ವಜನಿಕರಿಗೆ ಅನ್ನ ಸಂತರ್ಪಣೆ ಕೈಗೊಳ್ಳಲಾಯಿತು. ಈ ವೇಳೆ  ಡಿಎಸ್ ಎಸ್ ಜಿಲ್ಲಾಧ್ಯಕ್ಷ ಯಲ್ಲಪ್ಪ, ತಾಲ್ಲೂಕು ಅಧ್ಯಕ್ಷ ಸುಭಾಶ್, ಪ್ರಕಾಶ್, ಜೈರಾಜ್, ರಮೇಶ, ಲಿಂಗಪ್ಪ, ಮರಿಯಪ್ಪ, ಛತ್ರಪತಿ, ಎ.ನಿಂಗಪ್ಪ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.

error: Content is protected !!