ಪುನೀತ್ ರಾಜ್‌ಕುಮಾರ್ ಜನ್ಮ ದಿನ : ಅನ್ನ ಸಂತರ್ಪಣೆ

ಮಲೇಬೆನ್ನೂರು, ಮಾ. 17- ಪಟ್ಟಣದ ಜ್ಯೋತಿ ಚಿತ್ರಮಂದಿರದಲ್ಲಿ `ಜೇಮ್ಸ್’ ಚಲನಚಿತ್ರ ಪ್ರದರ್ಶನ ಹಾಗೂ ನಟ ಪುನೀತ್ ರಾಜ್‌ಕುಮಾರ್ ಅವರ ಹುಟ್ಟುಹಬ್ಬದ ಅಂಗವಾಗಿ ಡಾ. ರಾಜ್‌ಕುಮಾರ್ ಮತ್ತು  ಡಾ. ಶಿವರಾಜ್‌ಕುಮಾರ್ ಹಾಗೂ ಪುನಿತ್ ರಾಜ್‌ಕುಮಾರ್ ಅಭಿಮಾನಿ ಬಳಗದ ವತಿಯಿಂದ ಅನ್ನ ಸಂತರ್ಪಣೆ ಏರ್ಪಡಿಸಲಾಗಿತ್ತು.

ನಟ ಪುನೀತ್‌ ಅವರ ಭಾವಚಿತ್ರಕ್ಕೆ ಬಹಳ ವಿಶೇಷವಾಗಿ ಹೂವಿನ ಅಲಂಕಾರ ಮಾಡಿ, ಪೂಜೆ ಸಲ್ಲಿಸಲಾಯಿತು.

ಮಾಜಿ ಶಾಸಕ ಬಿ.ಪಿ. ಹರೀಶ್, ಜಿಲ್ಲಾ ಬಿಜೆಪಿ ಅಧ್ಯಕ್ಷ ಹನಗವಾಡಿ ವೀರೇಶ್, ಹರಿಹರ ತಾ. ಗ್ರಾಮಾಂತರ ಬಿಜೆಪಿ ಅಧ್ಯಕ್ಷ ಹಿಂಡಸಘಟ್ಟಿ ಲಿಂಗರಾಜ್, ಪುರಸಭೆ ಸದಸ್ಯರಾದ ಗೌಡ್ರ ಮಂಜಣ್ಣ, ಬೆಣ್ಣೆಹಳ್ಳಿ ಸಿದ್ದೇಶ್, ಬಿ. ಮಂಜುನಾಥ್, ಪಿ.ಆರ್. ರಾಜು, ಎಂ.ಕೆ. ಲೋಕೇಶ್, ಮುಖಂಡರಾದ ಕೆ.ಜಿ. ವೀರನಗೌಡ್ರು, ಜಿಗಳೇರ ಹಾಲೇಶಪ್ಪ, ಪಾಳೇಗಾರ ನಾಗರಾಜ್, ಬೆಣ್ಣೆಹಳ್ಳಿ ಬಸವರಾಜ್, ಕುಂಬಳೂರು ಅಶೋಕ್, ಕೊಮಾರನಹಳ್ಳಿ ಸುನೀಲ್, ಜಿ.ಪಿ. ಹನುಮಗೌಡ, ಪುನೀತ್ ರಾಜ್‌ಕುಮಾರ್ ಅಭಿಮಾನಿ ಬಳಗದ ಕಿರಣ, ದೊರೆ, ಶಶಿ, ಶಿವು, ಕುಮಾರ, ರಾಮು, ಕಿಟ್ಟಿ, ಮಣಿಕಂಠ, ರಾಮಚಂದ್ರ, ಮೈಲಾರಿ ಮತ್ತಿತರರು ಭಾಗವಹಿಸಿದ್ದರು. 

ನಂತರ ಪಿಡಬ್ಲ್ಯೂಡಿ ಶಾಲೆಯ ವಿದ್ಯಾರ್ಥಿಗಳಿಗೆ ಉಚಿತ ನೋಟ್‌ ಬುಕ್ ವಿತರಿಸಲಾಯಿತು.

error: Content is protected !!